News Karnataka Kannada
Thursday, May 02 2024
ದೇಶ

ಈ ಪ್ರೀತಿ ಒಂಥರಾ. . . .; ಬಾಯ್​ಫ್ರೆಂಡ್​​ಗಾಗಿ ಬಾಂಗ್ಲಾದಿಂದ ಭಾರತಕ್ಕೆ ಬಂದ ಯುವತಿ

ಭಾರತೀಯನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ. ರುಮಾ ಮರಿಯಮ್ ಎಂಬಾಕೆ ಒಡಿಶಾದ ಬಾಲಸೋರ್​​​​ ಜಿಲ್ಲೆಯ ನಿವಾಸಿಯಾದ ಬೀರೇಂದ್ರ ಪ್ರತಾಪ್​ ಎಂಬಾತನನ್ನು ಆರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡರು. ಕ್ರಮೇಣ ಇವರ ಪರಿಚಯ ಗೆಳೆತನದಿಂದ ಪ್ರೀತಿಗೆ ತಿರುಗಿತು.
Photo Credit : News Kannada

ದೆಹಲಿ: ಭಾರತೀಯನ ಪ್ರೀತಿಗೆ ಬಿದ್ದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದಾಳೆ. ರುಮಾ ಮರಿಯಮ್ ಎಂಬಾಕೆ ಒಡಿಶಾದ ಬಾಲಸೋರ್​​​​ ಜಿಲ್ಲೆಯ ನಿವಾಸಿಯಾದ ಬೀರೇಂದ್ರ ಪ್ರತಾಪ್​ ಎಂಬಾತನನ್ನು ಆರು ವರ್ಷದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡರು. ಕ್ರಮೇಣ ಇವರ ಪರಿಚಯ ಗೆಳೆತನದಿಂದ ಪ್ರೀತಿಗೆ ತಿರುಗಿತು.

ಬೀರೇಂದ್ರ ಪ್ರತಾಪ್ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದ. ಆಕೆಯನ್ನು ಕಾಣಲು ಬಾಂಗ್ಲಾದೇಶಕ್ಕೂ ಹೋಗಿದ್ದಾನೆ. ಆಕೆಯನ್ನು ಭೇಟಿಯಾಗಿದ್ದಲ್ಲದೆ ದೈಹಿಕ ಸಂಬಂಧ ಕೂಡ ನಡೆಸಿದ್ದಾನೆ ಎಂದು ರುಮಾ ಹೇಳಿದ್ದಾಳೆ.

ಕೊನೆಗೆ ರುಮಾ ತನ್ನ ಪ್ರಿಯಕರ ಬಳಿ ಮದುವೆಯಾಗಲು ಕೇಳುತ್ತಾಳೆ. ಇಸ್ಲಾಂಮಿಕ್​​ ವಿಧಿಗಳ ಪ್ರಕಾರ ವಿವಾಹವಾಗೋಣ ಎಂದು ಒತ್ತಾಯಿಸಿದಾಗ ಆತ ನಿರಾಕರಿಸಿದ್ದಾನೆ. ಬಳಿಕ ಆತ ಬಾಂಗ್ಲಾದಿಂದ ಒಡಿಶಾಗೆ ಹಿಂತಿರುಗಿದ್ದಾನೆ.

ಆದರೆ ಆತನ ನೆನಪಲ್ಲೇ ಉಳಿದುಕೊಂಡಿದ್ದ ರುಮಾ ಇದೀಗ ಪ್ರಿಯಕರನ ಬಳಿಗೆ ಓಡೋಡಿ ಬಂದಿದ್ದಾಳೆ. ಬಾಲಸೋರ್​ ತಲುಪಿದ್ದಾಳೆ. ಮಾತ್ರವಲ್ಲದೆ, ಬೀರೇಂದ್ರ ಪ್ರತಾಪ್ ಮನೆಗೆ ಹೋಗಿದ್ದಾಳೆ. ಆದರೆ ಪ್ರಿಯಕರನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಅಲ್ಲದೆ ಆತನಿಗೆ ಈಗಾಗಲೇ ಮದುವೆಯಾಘಿರುವುದಾಗಿ ತಿಳಿಸಿದ್ದಾರೆ. ಆದರೆ ಯುವತಿ ಮಾತ್ರ ಆತನನ್ನು ಮದುವೆಯಾಗಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಮಾತ್ರವಲ್ಲದೆ, ತನಗೆ ನ್ಯಾಯ ಬೇಕೆಂದು ಪೊಲೀಸ್​ ವರಿಷ್ಠಾಧಿಕಾರಿಯನ್ನ ಭೇಟಿ ಮಾಡಿ ದೂರು ದಾಖಲಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು