ಪಶ್ಚಿಮ ಬಂಗಾಳದ : ಇತ್ತೀಚೆಗೆ ಮೂಡಿ ಬಂದಿರುವ ಸನಿಮಾಗಳು ನೈಜ ಘಟನೆ ಆಧರಿತ ಸಿನಿಮಾಗಳು ಹಾಗೂ ಸಮಾಜಕ್ಕೆ ಜಾಗೃತಿ ಮೂಡಿಸುವ ಚಿತ್ರಗಳು. ಇದೀಗ ಅಂತಹ ಮತ್ತೊಂದು ಸಿನಿಮಾ ನಿಮ್ಮಮುಂದೆ ಬರಲು ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದ ಸಂದೇಶ್ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯ ಪ್ರಕರಣ ಎಲ್ಲಡೆ ಸದ್ದು ಮಾಡಿತ್ತು. ಇದೀಗ ಸಿನಿಮಾ ಮೂಲಕ ಸಂದೇಶ್ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ನ ಮುಖಂಡ ಶಹಜಹಾನ್ ಶೇಖ್ ನಡೆಸಿದ ಅಕ್ರಮಗಳನ್ನು ಬಯಲಿಗೆ ಎಳೆಯುವ ಪ್ರಯತ್ನಕ್ಕೆ ಸಿನಿಮಾ ತಂಡ ಸಿದ್ದತೆ ನಡೆಸುತ್ತಿದೆ.
ಸಂದೇಶ್ಖಾಲಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯ ಮತ್ತು ಅಲ್ಲದೇ ಭೂಮಿಯನ್ನು ವಶ ಪಡಿಸಿಕೊಂಡಿದ್ದ ಕಾಂಗ್ರೆಸ್ನ ಮುಖಂಡ ಶಹಜಹಾನ್ ಶೇಖ್ ವಿರುದ್ಧ ಎಲ್ಲ ಮಹಿಳೆಯರು ಸಿಡಿದೆದ್ದಿದ್ದಾರೆ. ಹಾಗಾಗಿ ಸಿನಿಮಾ ಮೂಲಕ ಆತನ ಸಂಪೂರ್ಣ ಅಕ್ರಮ ದೌರ್ಜನ್ಯಗಳನ್ನು ಹೊರ ತರುವ ಪ್ರಯತ್ನಮಾಡಲಿದೆ ಚಿತ್ರ ತಂಡ. ಈ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದ್ದು ಸಿನಿಮಾದ ಶೀರ್ಷಿಕೆ ʻಸಂದೇಶ್ಖಾಲಿʼ ಇಡಲಾಗಿದೆ.ಇದನ್ನು ವಿಷೇಶವಾಗಿ ಮಹಿಳಾ ದಿನದಂದು ಘೋಷಿಸಲಾಗಿದೆ.
ಇನ್ನೇನು ಆಗಸ್ಟ ನಲ್ಲಿ ಶೂಟಿಂಗ್ ಆಗಲಿದ್ದು ಚುನಾವಣೆ ಮೊದಲೇ ಸಿನಿಮಾ ಬಿಡುಗಡೆ ಮಾಡುವ ಭರವಸೆಯಲ್ಲಿದ್ದಾರೆ.‘ಭಯ, ದೌರ್ಜನ್ಯ ಹಾಗೂ ತುಳಿತದ ವಿರುದ್ಧ ನಡೆದ ಯುದ್ಧದ ನೈಜ ಕಥೆ’ ಎಂಬ ಟ್ಯಾಗ್ಲೈನ್ ಈ ಸಿನಿಮಾದ ಪೋಸ್ಟರ್ನಲ್ಲಿದೆ.
‘ಪರಿನ್ ಮಲ್ಟಿಮೀಡಿಯಾ’ ಬ್ಯಾನರ್ ಮೂಲಕ ‘ಸಂದೇಶ್ಖಾಲಿ’ ಮೂಡಿಬರಲಿದ್ದು, ಸುಮೀತ್ ಚೌಧರಿ ಮತ್ತು ಕೇವಲ್ ಸೇಟ್ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಸೌರಭ್ ತಿವಾರಿ ಅವರು ಸಿನಿಮಾದ ನಿರ್ದೇಶನದ ಮಾಡಲಿದ್ದಾರೆ ಅಮಿತಾಭ್ ಸಿಂಗ್ ಹಾಗೂ ಇಶಾನ್ ಬಾಜ್ಪಾಯಿ ಅವರು ಚಿತ್ರಕಥೆ ಬರೆಯಲಿದ್ದಾರೆ.
ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…
ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.
ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…
ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…