ಬರೇಲಿ, ಜ.22: ಪತಿ ಗಮನ ಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು 7 ವರ್ಷದ ಮಗಳನ್ನು ಮಲತಾಯಿ ಕೊಂದಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಬಹೇದಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘನಶ್ಯಾಮ್ ಎಂಬ ಕಾರ್ಮಿಕ ಮೂರು ವರ್ಷಗಳ ಹಿಂದೆ ಅನಾರೋಗ್ಯದಿಂದ ತನ್ನ ಮೊದಲ ಹೆಂಡತಿ ತೀರಿಕೊಂಡ ನಂತರ ವಿಧವೆಯನ್ನು ಮರುಮದುವೆಯಾದರು. ಆಕೆ ತನ್ನೊಡನೆ ತನ್ನ 4 ವರ್ಷದ ಮಗ ಮತ್ತು ಒಂದು ವರ್ಷದ ಮಗಳನ್ನು ಕರೆತಂದರು.
ಘನಶ್ಯಾಮ್ ತನ್ನ ಮೊದಲ ಹೆಂಡತಿಯಿಂದ ಮಗಳು ರಶ್ಮಿ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದರು. ಆದ್ದರಿಂದ, ತನ್ನ ಎರಡನೇ ಹೆಂಡತಿ ಸಂತೋಷವಾಗಿರಲಿಲ್ಲ ಎಂದು ಪೊಲೀಸರಿಗೆ ಘನಶ್ಯಾಮ್ ತಿಳಿಸಿದ್ದಾನೆ.
ಇದರಿಂದ ಕೋಪಗೊಂಡ ಎರಡನೇ ಪತ್ನಿ ಮನೆಯಲ್ಲಿ ಮಲಗಿದ್ದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಪೊಲೀಸರು ಘನಶ್ಯಾಮ್ ಅವರ ಎರಡನೇ ಹೆಂಡತಿಯ ವಿರುದ್ಧ ಕೊಲೆ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.
ಸರ್ಕಲ್ ಆಫೀಸರ್ ತೇಜ್ವೀರ್ ಸಿಂಗ್ ಮಾತನಾಡಿ, “33 ವರ್ಷದ ಭಾರತಿ ದೇವಿ ವಿರುದ್ಧ ಅವರ ಪತಿ ಘನಶ್ಯಾಮ್ ಅವರ ದೂರಿನ ಮೇರೆಗೆ ನಾವು ಎಫ್ಐಆರ್ ದಾಖಲಿಸಿದ್ದೇವೆ.
“ಭಾರತಿ ತಮ್ಮ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಸಾಂದರ್ಭಿಕ ಪುರಾವೆಗಳು ಅದನ್ನು ಸೂಚಿಸುತ್ತವೆ ಎಂದು ಘನಶ್ಯಾಮ್ ನಮಗೆ ತಿಳಿಸಿದರು. ನಾವು ಆಕೆಯ ವಿರುದ್ಧ ಕೊಲೆ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಸಾವಿನ ಕಾರಣವನ್ನು ದೃಢೀಕರಿಸಲು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ.