News Karnataka Kannada
Friday, May 17 2024
ಉತ್ತರ ಪ್ರದೇಶ

ಪಠ್ಯ ವಿವಾದ: ಉತ್ತರ ಪ್ರದೇಶ ಶಾಲಾ ವಿದ್ಯಾರ್ಥಿಗಳಿಗೆ ಸಾವರ್ಕರ್‌ ಓದು ಕಡ್ಡಾಯ

UP Board syllabus includes chapter of Savarkar
Photo Credit : IANS

ಲಕ್ನೋ: ಉತ್ತರ ಪ್ರದೇಶದಲ್ಲಿ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವೀರ್ ಸಾವರ್ಕರ್ ಅವರ ಜೀವನ ಚರಿತ್ರೆ ಅಧ್ಯಯನ ಕಡ್ಡಾಯವಾಗಿರಲಿದೆ. ಸಾವರ್ಕರ್ ಅಲ್ಲದೇ 50 ಮಹಾಪುರುಷರ ಜೀವನದ ಅಧ್ಯಾಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಲಾಗಿದೆ.

ಅವರಲ್ಲಿ ದೀನ್ ದಯಾಳ್ ಉಪಾಧ್ಯಾಯ, ಮಹಾವೀರ್ ಜೈನ್, ಪಂಡಿತ್ ಮದನ್ ಮೋಹನ್ ಮಾಳವೀಯ, ಅರವಿಂದ್ ಘೋಷ್, ರಾಜಾ ರಾಮ್ ಮೋಹನ್ ರಾಯ್, ಸರೋಜಿನಿ ನಾಯ್ಡು, ನಾನಾ ಸಾಹೇಬ್, ಚಂದ್ರಶೇಖರ್, ರಾಮಕೃಷ್ಣ ಪರಮಹಂಸರ ಪಠ್ಯಗಳು ಸೇರಿವೆ. ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶ ಶಿಕ್ಷಣ ಸಚಿವ ಗುಲಾಬ್ ದೇವಿ ಮಾತನಾಡಿ, ರಾಷ್ಟ್ರ ನಾಯಕರ ಪಠ್ಯಕ್ರಮ ಓದಿನಿಂದ ಮಕ್ಕಳಲ್ಲಿ ನೈತಿಕ ಮತ್ತು ಸಾಂಸ್ಕೃತಿಕ ಮೌಲ್ಯ ಬೆಳವಣಿಗೆಯಾಗುತ್ತದೆ ಎಂದು ತಿಳಿಸಿದ್ದಾರೆ.

ವಿರೋಧಪಕ್ಷಗಳು ಪಠ್ಯಕ್ರಮ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿವೆ. ಏತನ್ಮಧ್ಯೆ, ವೀರ್ ಸಾವರ್ಕರ್ ಅವರ ಅಧ್ಯಾಯವನ್ನು ಸೇರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಯುಪಿ ಸರ್ಕಾರವನ್ನು ಕೇಳಿದೆ. ಎಸ್ಪಿ ವಕ್ತಾರ ಸುನೀಲ್ ಸಾಜನ್ ಮಾತನಾಡಿ, ಬ್ರಿಟಿಷರ ಕ್ಷಮೆಯಾಚಿಸುವ ಮೂಲಕ ದೇಶಪ್ರೇಮಿಗಳ ಭಾವನೆಗಳಿಗೆ ದ್ರೋಹ ಬಗೆದ ವೀರ ಸಾವರ್ಕರ್ ಅವರ ಪಠ್ಯವನ್ನು ಸೇರಿಸಿಕೂಡದು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು