ಉತ್ತರ ಪ್ರದೇಶ: ನಗರದ ಡಿಯೋರಿಯಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಮಹಿಳೆಯೋಬ್ಬರು ಮನೆಯಲ್ಲಿ ಟೀ ಮಾಡುವ ವೇಳೆ ಸಿಲಿಂಡರ್ ಸ್ಪೋಟಗೊಂಡು ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ದಾರುಣವಾಗಿ ಸಾವನಪ್ಪಿದ್ದಾರೆ.
ಈ ಘಟನೆ ಭಲುನಿ ಪ್ರದೇಶದ ದುಮ್ರಿ ಗ್ರಾಮದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ. ವರದಿ ಪ್ರಕಾರ , ಶಿವಶಂಕರ್ ಗುಪ್ತಾ ಅವರ ಪತ್ನಿ ಆರತಿ ದೇವಿ (35) ಬೆಳಗ್ಗೆ ಟೀ ಮಾಡುತ್ತಿದ್ದಾಗ ಏಕಾಏಕಿ ಸಿಲಿಂಡರ್ ಸಿಡಿದು ಆರತಿ ಮತ್ತು ಅವರ ಮಕ್ಕಳಾದ ಆಂಚಲ್(14), ಕುಂದನ್(12) ಮತ್ತು 11 ತಿಂಗಳ ಸೃಷ್ಟಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ವಿಷಯ ತಿಳಿದ ಕೂಡಲೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಪೋಲೀಸ್ ವರಿಷ್ಠಾದಿಕಾರಿ ಸ್ಥಳಕ್ಕೆ ಆಗಮಿಸಿ ತನುಖಾ ವರದಿಯನ್ನು ಸರ್ಕಾರಕ್ಕೆ ತಿಳಿಸಿದ್ದಾರೆ. ಮೃತದೇಹಗನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.