ಜೌನಪುರ: ಉತ್ತರ ಪ್ರದೇಶದ ಜೌನಪುರ ಜಿಲ್ಲೆಯ ಪೊರೈ ಕಲಾ ಗ್ರಾಮದಲ್ಲಿ ಶನಿವಾರ ರಾತ್ರಿ ಸಿಡಿಲು ಬಡಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ಶಹಗಂಜ್ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಶೈಲೇಂದ್ರ ಕುಮಾರ್ ಮಾತನಾಡಿ, ಈ ಪ್ರದೇಶದಲ್ಲಿ ಲಘು ಮಳೆಯಾಗಿದೆ, ನಂತರ ಕಾರ್ಮಿಕರು ರಕ್ಷಣೆ ಪಡೆಯಲು ಓಡಲು ಪ್ರಾರಂಭಿಸಿದರು. ಈ ಸಮಯದಲ್ಲಿ 13 ಕಾರ್ಮಿಕರು ಸಿಡಿಲು ಬಡಿದಿದೆ. ಈ ವೇಳೆ 60 ವರ್ಷದ ದಾಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಗೊಂಡವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದ್ದು, ಅಲ್ಲಿಂದ ಕಿರಣ್, ಸೀತಾ, ಕನ್ಹಯ್ಯ ಮತ್ತು ಕಮಲಾ ಎಂಬ ನಾಲ್ವರು ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.