ಲಕ್ನೋ: ಆರ್ಡರ್ ಡೆಲಿವರಿ ಮಾಡುವಾಗ 25 ವರ್ಷದ ದಲಿತ ಫುಡ್ ಡೆಲಿವರಿ ಎಕ್ಸಿಕ್ಯೂಟಿವ್ ಒಬ್ಬರನ್ನು ಗ್ರಾಹಕರ ಗುಂಪೊಂದು ಥಳಿಸಿ ನಿಂದಿಸಿದ ಮೂರು ದಿನಗಳ ನಂತರ ಲಖನೌ ಪೊಲೀಸರು ಮಂಗಳವಾರ ಸಂಜೆ ಇಬ್ಬರನ್ನು ಬಂಧಿಸಿದ್ದಾರೆ.
ಗ್ರಾಹಕ ಅಜಯ್ ಸಿಂಗ್ (40) ಅವರು ಡೆಲಿವರಿ ಎಕ್ಸಿಕ್ಯೂಟಿವ್ ವಿನೀತ್ ಕುಮಾರ್ ರಾವತ್ ದಲಿತ ಸಮುದಾಯಕ್ಕೆ ಸೇರಿದವರು ಎಂದು ತಿಳಿದ ನಂತರ ಅವರ ಕೈಯಿಂದ ಆಹಾರವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಅವರ ವಿರುದ್ಧ ಜಾತಿವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು.
ಆ ಸಮಯದಲ್ಲಿ ಅಜಯ್ ಮತ್ತು ಅವರ ಮನೆಯಲ್ಲಿದ್ದ ಇತರರು ರಾವತ್ ಅವರನ್ನು ಥಳಿಸಿದ್ದರು ಎಂದು ವರದಿಯಾಗಿದೆ.
ರಾವತ್ ಶನಿವಾರ ಸಂಜೆ ಆಶಿಯಾನಾ ಪ್ರದೇಶದಲ್ಲಿ ಆರ್ಡರ್ ಡೆಲಿವರಿ ಮಾಡಲು ಹೋದಾಗ ಈ ಘಟನೆ ನಡೆದಿದೆ. ರಾವತ್ ಅವರು ಫುಡ್ ಅಗ್ರಿಗೇಟರ್ ಜೊಮ್ಯಾಟೊದಲ್ಲಿ ಕೆಲಸ ಮಾಡುತ್ತಿದ್ದಾರೆ.
ಪೊಲೀಸರು ಅಜಯ್ ಮತ್ತು ವಿವೇಕ್ ಶುಕ್ಲಾ (25) ವಿರುದ್ಧ ಸಿಆರ್ಪಿಸಿಯ ಸೆಕ್ಷನ್ 151 ಅನ್ನು ದಾಖಲಿಸಿದ್ದಾರೆ ಎಂದು ಎಸಿಪಿ (ಕಂಟೋನ್ಮೆಂಟ್) ಅರ್ಚನಾ ಸಿಂಗ್ ಬುಧವಾರ ತಿಳಿಸಿದ್ದಾರೆ.
ರಾವತ್ ಸಲ್ಲಿಸಿದ ಎಫ್ಐಆರ್ ನಲ್ಲಿ ಅಜಯ್ ಮತ್ತು ಇತರ ೧೩ ಜನರನ್ನು ಹೆಸರಿಸಲಾಗಿದೆ. ಅಜಯ್ ಹೊರತುಪಡಿಸಿ, ಅಭಯ್ ಸಿಂಗ್ ಮತ್ತು ಇತರ 12 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147 (ಗಲಭೆ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು ಎಸ್ಸಿ / ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.