ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾಪನೆಗೆ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಇದೀಗ ಭಕ್ತರಿಗೆ ಸೇವೆ ಒದಗಿಸಲು ಕರ್ಣಾಟಕ ಬ್ಯಾಂಕ್’ನ ನೂತನ ಶಾಖೆಯನ್ನು ಅಯೋಧ್ಯೆಯಲ್ಲಿ ಪ್ರಾರಂಭಿಸಿದೆ.
ಇದು ದೇಶದ 915ನೇ ಶಾಖೆಯಾಗಿದೆ. ಅಯೋಧ್ಯೆಗೆ ಬರುವ ಭಕ್ತರಿಗೆ ಸೇವೆ ಒದಗಿಸೋ ಕೆಲಸ ಇದು ಮಾಡಲಿದೆ. ಅಯೋಧ್ಯೆಯ ರಾಮಪಥದ ಮುಖ್ಯ ರಸ್ತೆಯಲ್ಲಿ ಬ್ಯಾಂಕ್ ಶಾಖೆ ಆರಂಭವಾಗಿದೆ.
ಶಾಖೆಯನ್ನ ರಾಮಮಂದಿರ ದೇವಸ್ಥಾನದ ಸಹ ಉಸ್ತುವಾರಿ ಮತ್ತು ಕನ್ನಡಿಗರಾದ ಗೋಪಾಲ್ ನಾಗರಕಟ್ಟೆ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಡೈರೆಕ್ಟರ್ ಶೇಕರ್ ರಾವ್, ಎಂಡಿ ಶ್ರೀಕೃಷ್ಣನ್ ಹರಿಹರ ಶರ್ಮಾ, ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದರು.