ಗೋರಖ್ಪುರ, ಸೆಪ್ಟೆಂಬರ್ 30: ಬೆನ್ನುಮೂಳೆಯ ಸ್ನಾಯು ಸೆಳೆತದಿಂದ (ಎಸ್ಎಂಎ) ಬಳಲುತ್ತಿರುವ ಡಿಯೋರಿಯಾ ಜಿಲ್ಲೆಯ 13 ವರ್ಷದ ಸಾರಾ ಫಾತಿಮಾ ಲಾರಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ.
ಕುಟುಂಬಕ್ಕೆ ಚಿಕಿತ್ಸೆಗಾಗಿ 10 ಕೋಟಿ ರೂ.ಗಳ ಅಗತ್ಯವಿದೆ ಎಂದು ವರದಿಯಾಗಿದೆ.
5 ನೇ ತರಗತಿಯ ವಿದ್ಯಾರ್ಥಿನಿಯಾದ ಬಾಲಕಿ, ಪ್ರತಿಕೂಲತೆಗಳ ಹೊರತಾಗಿಯೂ ಮನೆಯಿಂದಲೇ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಾಳೆ.ಆಕೆಯ ತಂದೆ ಅಬುಜಾರ್ ಲಾರಿ ಡಿಯೋರಿಯಾದಲ್ಲಿ ಪಾದರಕ್ಷೆ ಅಂಗಡಿ ನಡೆಸುತ್ತಿದ್ದಾರೆ, ತಾಯಿ ಸೋಫಾನಾ ಗೃಹಿಣಿಯಾಗಿದ್ದಾರೆ.
ಯೋಗಿ ಅವರು ಇತ್ತೀಚೆಗೆ ಗೋರಖ್ನಾಥ್ ದೇವಾಲಯದಲ್ಲಿ ಕುಟುಂಬ ಸದಸ್ಯರನ್ನು ಭೇಟಿಯಾದರು ಮತ್ತು ಅವರಿಗೆ ಆರ್ಥಿಕ ಸಹಾಯದ ಭರವಸೆ ನೀಡಿದರು.