News Karnataka Kannada
Thursday, May 02 2024
ಉತ್ತರ ಪ್ರದೇಶ

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸಹೋದ ಡಿಎಸ್​ಪಿ

ಉತ್ತರ ಪ್ರದೇಶದಲ್ಲಿ ಲೇಡಿ ಸಿಂಗಂ ಎಂದೇ ಪ್ರಖ್ಯಾತರಾಗಿರುವ ಡಿಎಸ್​ಪಿ ಶ್ರೇಷ್ಠಾ ಠಾಕೂರ್ ಅವರ ಕೆಲಸಗಳು ಜನರು ಮೆಚ್ಚುವಂಥದ್ದು.  ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮದುವೆಯಾಗಿ ಮೋಸಹೋಗಿದ್ದಾರೆ.
Photo Credit : News Kannada

ಉತ್ತರ ಪ್ರದೇಶದ: ಉತ್ತರ ಪ್ರದೇಶದಲ್ಲಿ ಲೇಡಿ ಸಿಂಗಂ ಎಂದೇ ಪ್ರಖ್ಯಾತರಾಗಿರುವ ಡಿಎಸ್​ಪಿ ಶ್ರೇಷ್ಠಾ ಠಾಕೂರ್ ಅವರ ಕೆಲಸಗಳು ಜನರು ಮೆಚ್ಚುವಂಥದ್ದು.  ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮದುವೆಯಾಗಿ ಮೋಸಹೋಗಿದ್ದಾರೆ.

2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಶ್ರೇಷ್ಠಾ ಠಾಕೂರ್ ಅವರು 2018 ರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ರೋಹಿತ್ ರಾಜ್ ಎಂಬ ವ್ಯಕ್ತಿಯನ್ನು ವಿವಾಹವಾದರು.ಶ್ರೇಷ್ಠಾ ಅವರಿಗೆ ರೋಹಿತ್ ರಾಜ್ ರಾಂಚಿಯಲ್ಲಿ ಡೆಪ್ಯುಟಿ ಕಮಿಷನರ್ ಆಗಿ ಪೋಸ್ಟ್ ಮಾಡಲಾದ 2008-ಬ್ಯಾಚ್ IRS ಅಧಿಕಾರಿ ಎಂದು ಸುಳ್ಳು ಹೇಳಿದ್ದ.

ಮದುವೆಯ ಬಳಿಕ ವಿಷಯಗಳು ತಿರುವು ಪಡೆದಿತ್ತು, ತನ್ನ ಪತಿ ಐಆರ್​ಎಸ್​ ಅಧಿಕಾರಿಯಲ್ಲ ಎಂಬುದು ಗೊತ್ತಾಗಿತ್ತು. ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಮಹಿಳಾ ಡಿಎಸ್ಪಿ ತನ್ನ ದಾಂಪತ್ಯವನ್ನು ಉಳಿಸಿಕೊಳ್ಳುವ ಸಲುವಾಗಿ ಸುಮ್ಮನಿದ್ದರು.

ಕೊನೆಗೆ ಆತ ಹೆಂಡತಿಯ ಹೆಸರಿನಲ್ಲಿ ವಂಚನೆ ಮಾಡಲು ಶುರು ಮಾಡಿದ್ದ, ಇದರಿಂದ ಬೇಸತ್ತು ಶ್ರೇಷ್ಠಾ ಠಾಕೂರ್ ಮದುವೆಯಾಗಿ ಎರಡು ವರ್ಷಗಳ ಬಳಿಕ ರೋಹಿತ್ ರಾಜ್​ಗೆ ವಿಚ್ಛೇದನ ನೀಡಿದ್ದರು. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ, ಆತ ವಂಚನೆಯನ್ನು ಮುಂದುವರೆಸಿದ್ದ ಹೀಗಾಗಿ ಅನಿವಾರ್ಯವಾಗಿ ಅವರು ಘಾಜಿಯಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು