News Karnataka Kannada
Sunday, May 05 2024
ಉತ್ತರ ಪ್ರದೇಶ

ಗುಬ್ಬು ನಾರುತ್ತಿರುವ ಕಾಲುವೆ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ರಸ್ತೆಯ ಮೇಲೆ ಕೊಳಕು, ಗಬ್ಬು ನಾರುತ್ತಿರುವ ಕಸದ ರಾಶಿಯ ನಡುವೆ ದಂಪತಿ ತಮ್ಮ 17 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಆಗ್ರಾ ನಗರದ ನಾಗ್ಲಾ ಕಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  17ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಧು-ವರರಂತೆ ವೇಷ ಧರಿಸಿದ ದಂಪತಿ ಪರಸ್ಪರ ಹೂಮಾಲೆ ಹಾಕಿಕೊಂಡರು.
Photo Credit : News Kannada

ತ್ತರಪ್ರದೇಶ: ರಸ್ತೆಯ ಮೇಲೆ ಕೊಳಕು, ಗಬ್ಬು ನಾರುತ್ತಿರುವ ಕಸದ ರಾಶಿಯ ನಡುವೆ ದಂಪತಿ ತಮ್ಮ 17 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ಆಗ್ರಾ ನಗರದ ನಾಗ್ಲಾ ಕಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.  17ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಧು-ವರರಂತೆ ವೇಷ ಧರಿಸಿದ ದಂಪತಿ ಪರಸ್ಪರ ಹೂಮಾಲೆ ಹಾಕಿಕೊಂಡರು.

ಈ ವೇಳೆ ಸ್ಥಳೀಯ ನಿವಾಸಿಗಳು ರಸ್ತೆ, ಚರಂಡಿಯನ್ನು ಸರಿಯಾಗಿ ನಿರ್ಮಿಸದಿದ್ದರೆ ಮತ ಹಾಕುವುದಿಲ್ಲ ಎಂಬ ಘೋಷಣಾ ಫಲಕಗಳನ್ನು ಹಿಡಿದುಕೊಂಡರು. ಕೊಳಕು ಮತ್ತು ಗಬ್ಬು ನಾರುವ ಚರಂಡಿಯ ನಡುವೆ ಇಬ್ಬರೂ ಫೋಟೋ ತೆಗೆದರು. ಕೊಳಚೆ ಹಾಗೂ ಕಸದ ರಾಶಿಯತ್ತ ಜಿಲ್ಲಾಡಳಿತದ ಗಮನ ಸೆಳೆಯಲು ದಂಪತಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.  15 ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ, ಆದರೆ ಕಳೆದ ಎಂಟು ತಿಂಗಳಿನಿಂದ ರಸ್ತೆಯು ಕೊಳಕು ಚರಂಡಿಯಾಗಿ ಮಾರ್ಪಟ್ಟಿದ್ದು, ಈ ಭಾಗದ ಜನರು ಮನೆಯಿಂದ ಹೊರಬರಲು ಕಷ್ಟಪಡುತ್ತಿದ್ದಾರೆ ಈ ಕುರಿತಾಗಿ ಸರ್ಕಾರದ ಗಮನಕ್ಕೆ ತರಲು ದಂಪತಿ ಈ ಹೊಸ ಯೋಚನೆ ಮಾಡಿದ್ದಾರೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು