ಉತ್ತರ ಪ್ರದೇಶ: ಲಕ್ನೋದಲ್ಲಿ ಕಾರು ಚಾಲಕನೊಬ್ಬ ತಂದೆಯೊಂದಿಗಿನ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂವರು ಮಕ್ಕಳ ಮೇಲೆ ಕಾರು ಹರಿಸಿದ ಆಘಾತಕಾರಿ ಘಟನೆ ನಡೆದಿದೆ. ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಜುಲೈ 13 ರಂದು ಲಕ್ನೋದ ಮಲಿಹಾಬಾದ್ ಪ್ರದೇಶದಲ್ಲಿ ಈ ಭೀಕರ ಘಟನೆ ಸಂಭವಿಸಿದೆ. ಎಫ್ಐಆರ್ ಪ್ರಕಾರ, ವೀರೇಂದ್ರ ಅಕೆ ಸೀತಾರಾಮ್ ಅವರ ಮೂವರು ಮಕ್ಕಳಾದ ಶಿವಾನಿ (8), ಸ್ನೇಹಾ (4) ಮತ್ತು ಕೃಷ್ಣ (3) ಮಾರುಕಟ್ಟೆಗೆ ಹೋಗುತ್ತಿದ್ದಾಗ ಗೋವಿಂದ ಎಂಬಾತ ಆ ಮಕ್ಕಳ ಮೇಲೆ ಏಕಾಏಕಿ ಕಾರು ಚಲಾಯಿಸಿದ್ದಾನೆ.
ಪರಿಣಾಮ ಮಕ್ಕಳಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಗೋವಿಂದ ಮಕ್ಕಳ ತಂದೆಯೊಂದಿಗೆ ದ್ವೇಷ ಹೊಂದಿದ್ದ. ಸೇಡು ತೀರಿಸಿಕೊಳ್ಳಲು ಮಕ್ಕಳ ಮೇಲೆ ಕಾರು ಚಲಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿ ಗೋವಿಂದ ವಿರುದ್ಧ ಎಪ್ ಐ ಆರ್ ದಾಖಲಾಗಿದೆ.
#Lucknow: In an incident captured in CCTV in Malihabad Kazikheda village, car driver Govind tried to take revenge of enmity with Virendra by ramming his 3 innocent children, the children were seriously injured, the accused arrested.#UttarPradesh pic.twitter.com/1rygNuBpAQ
— Siraj Noorani (@sirajnoorani) July 18, 2023