ಲಖನೌ: ಉತ್ತರ ಪ್ರದೇಶದ ಸರಯೂ ನದಿ ದಡದಲ್ಲಿ 22.23 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವ ಗಿನ್ನೆಸ್ ದಾಖಲೆ ಬರೆದ ದೀಪೋತ್ಸವ ಕಾರ್ಯಕ್ರಮದ ಇನ್ನೊಂದು ಮುಖವನ್ನು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಬಹಿರಂಗ ಮಾಡಿದ್ದಾರೆ.
ದೀಪೋತ್ಸವ ಕಾರ್ಯಕ್ರಮಗಳಿಂದ ದೀಪಗಳಿಂದ ಎಣ್ಣೆ ಕದ್ದು ಬಸಿದುಕೊಳ್ಳುತ್ತಿರುವ ಮಕ್ಕಳ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಖಿಲೇಶ್ ಯಾದವ್ ದೈವಿಕ ವಿಜೃಂಭಣೆ ನಡುವೆ ಬಡತನ ಎಂದು ಬರೆದುಕೊಂಡಿದ್ದಾರೆ.
ದೀಪದಲ್ಲಿರುವ ಎಣ್ಣೆಯನ್ನು ಬಸಿದುಕೊಂಡು ತುಂಬಿಕೊಳ್ಳುವಷ್ಟು ಬಡತನ ಕಾಡಿದರೆ ಅಲ್ಲಿ ಯಾವ ಆಚರಣೆಗೂ ಅರ್ಥವಿಲ್ಲ. ಘಾಟಿಗಳು ಮಾತ್ರವಲ್ಲ ಪ್ರತಿ ಬಡವರ ಮನೆಯಲ್ಲೂ ದೀಪಗಳು ಬೆಳಗಬೇಕು ಎಂದು ಬರೆದುಕೊಂಡಿದ್ದಾರೆ.
दिव्यता के बीच दरिद्रता… जहाँ ग़रीबी दीयों से तेल ले जाने के लिए मजबूर करे, वहाँ उत्सव का प्रकाश धुंधला हो जाता है।
हमारी तो यही कामना है कि एक ऐसा पर्व भी आये, जिसमें सिर्फ़ घाट नहीं, हर ग़रीब का घर भी जगमगाए। pic.twitter.com/hNS8w9z96B
— Akhilesh Yadav (@yadavakhilesh) November 11, 2023