ಇಬ್ಬರು ಕಿಡಿಗೇಡಿಗಳು ಸೇರಿ ಓರ್ವ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ಹೈದರಾಬಾದ್ನ ಭಾಗ್ಯನಗರದಲ್ಲಿ ನಡೆದಿದೆ.
ಈ ದುರಂತ ಘಟನೆ ತಡರಾತ್ರಿ ನಡೆದಿದೆ. ಆದಿಲ್, ಅಜರ್ ಮತ್ತು ಮಹಮೂದ್ ಅಲಿ ಮೂವರು ಮನೋವೈದ್ಯಕೀಯ ಆಸ್ಪತ್ರೆಯೊಂದರ ಮೈದಾನಕ್ಕೆ ಬಂದಿದ್ದಾರೆ.
ಈ ವೇಳೆ ಮೂವರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಅದು ವಾಗ್ವಾದಕ್ಕಿಳಿದಿದೆ. ಕೂಡಲೇ ಅದಿಲ್ ಮೇಲೆ ಅಜಿರ್ ಹಾಗೂ ಮೊಹಮೂದ್ ಅಲಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆಗೆ ತಡೆಯಲಾಗದೆ ರಸ್ತೆಯಲ್ಲಿ ಅದಿಲ್ ಬಿದ್ದು ಒದ್ದಾಡಿದ್ದಾನೆ. ಘಟನೆ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಂಭೀರ ಗಾಯಗೊಂಡ ಆದಿಲ್ ಅವರನ್ನು ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುಮಾರು 90ರಷ್ಟು ದೇಹದ ಭಾಗ ಸುಟ್ಟುಹೋಗಿದೆ. ಆರೋಪಿಗಳ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಂಕಿತರು ಪಕ್ಕಾ ಪ್ಲಾನ್ನೊಂದಿಗೆ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.