ಉತ್ತರಪ್ರದೇಶ : ಕುಡುಕ ತಂದೆಯೊಬ್ಬ ಸಿಟ್ಟಿನಲ್ಲಿ ತನ್ನ ಒಂಭತ್ತು ವರ್ಷದ ಮಗನನ್ನ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಮೈನ್ಪುರಿ ಜಿಲ್ಲೆಯ ಅಲವಲ್ಪುರದ ಮಾದಯ್ಯ ಗ್ರಾಮದ ನಿವಾಸದಲ್ಲಿ, ಪಾಪಿ ತಂದೆ ತನ್ನ ನಾಲ್ಕು ವರ್ಷದ ಮಗಳ ಸಮ್ಮುಖದಲ್ಲೇ ಆಕೆಯ ಅಣ್ಣನನ್ನ ಕೊಂದಿದ್ದಾನೆ. ಕೇವಲ ಮೊಬೈಲ್ ಫೋನ್ ಹುಡುಕಿಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಈ ಕೃತ್ಯ ಎಸಗಿರುವ ಪಾಪಿಯನ್ನ ಮುಖೇಶ್ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಮಂಗಳವಾರ ಸಂಜೆ, ಮುಖೇಶ್ ಚೆನ್ನಾಗಿ ಕುಡಿದ ಮತ್ತಿನಲ್ಲಿ ಮನೆಗೆ ಮರಳಿದ್ದಾನೆ. ನಶೆಯಲ್ಲಿದ್ದ ಆರೋಪಿಗೆ ಅವನ ಫೋನ್ ಎಲ್ಲಿಟ್ಟಿದ್ದ ಎಂಬುದು ನೆನಪಿರಲಿಲ್ಲ. ಈ ವೇಳೆ ಫೋನ್ ಹುಡುಕುವಂತೆ ಆತ ತನ್ನ ಮಗ ಮಿಥುನ್ಗೆ ಹೇಳಿದ್ದಾನೆ. ಆದರೆ, ಮಗುವಿಗೆ ಫೋನ್ ಅನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಇದರಿಂದ ಕುಪಿತಗೊಂಡ ಮುಖೇಶ್ ಒಂಭತ್ತು ವರ್ಷದ ಕಂದನ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯಕ್ಕೆ ಆತನ ನಾಲ್ಕು ವರ್ಷದ ಮಗಳು ಫಲಕ್ ಸಾಕ್ಷಿಯಾಗಿದ್ದಾಳೆ.
ಬುಧವಾರ, ಮೃತ ಮಗುವಿನ ಅಜ್ಜ ಲಖನ್ ಸಿಂಗ್ ಅವರು ಮುಖೇಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಮುಖೇಶ್ ಗೆ ಕುಡಿತದ ಚಟ ಇತ್ತು ಎಂದು ಲಖನ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವನ ದುರಾಭ್ಯಾಸಗಳಿಂದ ಅವನ ಹೆಂಡತಿ ವಿಜಯಕುಮಾರಿ ಮನೆಬಿಟ್ಟು ಹೋಗಿದ್ದಾರೆ. ಎಂಟು ತಿಂಗಳ ಹಿಂದೆ, ಅವರು ತಮ್ಮ ಆರು ಮಕ್ಕಳಲ್ಲಿ ನಾಲ್ವರು ಮಕ್ಕಳೊಂದಿಗೆ ಪಂಜಾಬ್ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ. ಫಲಕ್ ಮತ್ತು ಮಿಥುನ್ ಅವರ ಅಪ್ಪನೊಂದಿಗೆ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ದೂರನ್ನು ಸ್ವೀಕರಿಸಿದ ಪೊಲೀಸರು, ಐಪಿಸಿ ಸೆಕ್ಷನ್ 304, ಕೊಲೆ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಮಿಥುನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…
ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಐಯ್ಯರ್ ಹೇಳಿಕೆಗೆ…
2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…
ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…
ಯಾರು ಮೋದಿಗೆ ವೋಟ್ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…
ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…