ಅಮರಾವತಿ: ತೆಲಂಗಾಣದ 26 ವಿಧಾನಸಭಾ ಕ್ಷೇತ್ರಗಳಿಗೆ ಜನಸೇನಾ ಪಕ್ಷದ (ಜೆಎಸ್ಪಿ) ನಾಯಕ ಪವನ್ ಕಲ್ಯಾಣ್ ಅವರು ಸೋಮವಾರ ಪ್ರಭಾರಿಗಳನ್ನು ನೇಮಕ ಮಾಡಿದ್ದಾರೆ ಮತ್ತು ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗುವಂತೆ ರಾಜ್ಯದ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ. ತೆಲಂಗಾಣದ ಜೆಎಸ್ಪಿ ನಾಯಕರೊಂದಿಗೆ ಸಭೆ ನಡೆಸಿ ಚುನಾವಣೆಗೆ ಸಿದ್ಧರಾಗುವಂತೆ ಸೂಚಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ಚಳವಳಿಯ ನೈಜ ಆಶಯಗಳನ್ನು ಈಡೇರಿಸಲು ಜೆಎಸ್ಪಿ ಕೆಲಸ ಮಾಡಲಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ತೆಲಂಗಾಣಕ್ಕಾಗಿ 1,300 ಹುತಾತ್ಮರು ಪ್ರಾಣ ತೆತ್ತಿದ್ದಾರೆ ಮತ್ತು ಪ್ರತ್ಯೇಕ ರಾಜ್ಯ ಸ್ಥಾಪನೆಯಾಗಿದ್ದರೂ ಅವರ ನಿರೀಕ್ಷೆಗಳು ಈಡೇರಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ವಿಧಾನಸಭೆ ಚುನಾವಣೆಗಾಗಿ ವಿಶೇಷ ಪ್ರಚಾರ ವಾಹನ ‘ವಾರಾಹಿ’ಯಲ್ಲಿ ಮೂಲಕ ಹಳ್ಳಿ ಹಳ್ಳಿಗರನ್ನು ತಲುಪಿ ಪಕ್ಷದ ವಿಚಾರಧಾರೆ ತಿಳಿಸಲಾಗುವುವುದು ಎಂದಿದ್ದಾರೆ. ರಾಜ್ಯದಲ್ಲಿ ಪಕ್ಷವು ಶೇಕಡಾ 20 ರಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಮೈತ್ರಿ ಅಥವಾ ಸ್ಥಾನಗಳ ಕುರಿತು ಶೀಘ್ರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಈ ವರ್ಷ ನವೆಂಬರ್-ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ ಖ್ಯಾತ ಚಿತ್ರ ನಿರ್ಮಾಪಕ ಬಿ.ವಿ.ಎಸ್.ಎನ್. ಸೋಮವಾರ ಪವನ್ ಕಲ್ಯಾಣ್ ಅವರ ಸಮ್ಮುಖದಲ್ಲಿ ಪ್ರಸಾದ್ ಜೆಎಸ್ಪಿಗೆ ಸೇರ್ಪಡೆಗೊಂದ್ದಾರೆ.