ಚೆನ್ನೈ: ಮಂಗಳವಾರ ಮಧ್ಯಾಹ್ನ ಚೆನ್ನೈನ ಅಮಿಜಿಕರೈ ಪ್ರದೇಶಕ್ಕೆ ಬಸ್ ತೆರಳುತ್ತಿದ್ದಾಗ ಮಹಿಳೆಯೊಬ್ಬರು ಚಲಿಸುತ್ತಿದ್ದ ಬಸ್ನಿಂದ ತಾವು ಕುಳಿತಿದ್ದ ಆಸನದ ಕೆಳಗಿರುವ ಮಹಡಿ ಕುಸಿದು ಬಿದ್ದ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ, ಮಹಿಳೆ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ನ ಸೀಟಿನ ಕೆಳಗಿರುವ ಬೋರ್ಡ್, ಇದ್ದಕ್ಕಿದ್ದಂತೆ ಮುರಿದು ಆಕೆಯ ಸೀಟಿನ ಕೆಳಗೆ ರಂಧ್ರ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ‘ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದಿದ್ದಾರೆ.
ಚೆನ್ನೈನ ತಿರುವೆಕ್ಕಾಡ್ ನಿಂದ ವಲ್ಲಾಲಾರ್ ನಗರಕ್ಕೆ ತೆರಳುತ್ತಿದ್ದ ಬಸ್ನೊಳಗೆ ಪ್ರಯಾಣಿಸುತ್ತಿದ್ದ ಸಹೋದರಿ ಸೀಟಿನ ಕೆಳಗಿದ್ದ ಬೋರ್ಡ್ ಒಡೆದು, ಓಡುತ್ತಿದ್ದ ಬಸ್ನಿಂದ ಕೆಳಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ಡಿಎಂಕೆ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಅಣ್ಣಾಮಲೈ ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಪೋಸ್ಟ್ನಲ್ಲಿ ಬರೆದಿದ್ದಾರೆ, ಜೊತೆಗೆ ಘಟನೆಯ ವೀಡಿಯೊವನ್ನು ಸಹ ಪೋಸ್ಟ್ ಮಾಡಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಇಲಾಖೆ ಸಂಪೂರ್ಣ ಸ್ತಬ್ದಗೊಂಡಿದೆ ಎಂದು ಒತ್ತಿ ಹೇಳಿದ ಅಣ್ಣಾಮಲೈ, “ರಾಜ್ಯದಲ್ಲಿ ಬಸ್ಗಳ ಕಳಪೆ ನಿರ್ವಹಣೆ ಮತ್ತು ಮಳೆಗಾಲದಲ್ಲಿ ನೀರು ನುಗ್ಗುವುದರಿಂದ ಸರ್ಕಾರಿ ಬಸ್ಗಳಲ್ಲಿ ಪುಯಾಣಿಸುವ ಪ್ರಯಾಣಿಕರು ಸುರಕ್ಷಿತವಾಗಿಲ್ಲ” ಎಂದು ಹೇಳಿದರು.
ಸಾರಿಗೆ ಇಲಾಖೆ ಮಾತ್ರವಲ್ಲದೆ, ತಮಿಳುನಾಡು ಸರ್ಕಾರದ ಪ್ರತಿಯೊಂದು ಇಲಾಖೆಯೂ ಇದೇ ರೀತಿಯ ಹತಾಶೆಯಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.
ಅಣ್ಣಾಮಲೈ ಅವರು ತೆರಿಗೆ ಮೂಲಕ ಸಂಗ್ರಹಿಸಿದ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು ಮತ್ತು ರಾಜ್ಯ ಸಾರಿಗೆ ಸಚಿವರನ್ನು ಕರೆದರು, “ಭ್ರಷ್ಟರಾಗಲು ವಿಭಿನ್ನ ಮಾರ್ಗಗಳ ಬಗ್ಗೆ ಯೋಚಿಸುವ ಸಚಿವರು ಸರ್ಕಾರಿ ಬಸ್ಗಳ ನಿರ್ವಹಣೆಯತ್ತಲೂ ಗಮನ ಹರಿಸಬೇಕು” ಎಂದು ಹೇಳಿದರು.
A sister who was sitting on the seat of bus track number 59 from Chennai Thiruverkadu to Vallalar Nagar fell down from the running bus after the board under the seat broke and luckily escaped with her life.#DMKFailsTNpic.twitter.com/49vK8zfGBH
— BJP Trends™ (@BJP_Trends) February 6, 2024