News Karnataka Kannada
Tuesday, May 07 2024
ತಮಿಳುನಾಡು

ಪ್ರವಾಹಕ್ಕೆ ಸಿಲುಕಿದ್ದ ಶ್ವಾನಗಳ ರಕ್ಷಣೆ: ನೆಟ್ಟಿಗರಿಂದ ಶ್ಲಾಘನೆ

ತಮಿಳುನಾಡಿನಲ್ಲಿ ಮಿಚಾಂಗ್‌ ಸೈಕ್ಲೋನ್‌ ಆರ್ಭಟದಿಂದಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವು ಪ್ರದೇಶಗಳಲ್ಲಿ ನಾಲ್ಕೈದು ಅಡಿ ನೀರು ನುಗ್ಗಿದ್ದು, ತುರ್ತು ಸೇವೆ ಹಾಗೂ ಅಗತ್ಯವ ವಸ್ತುಗಳಿಗೂ ಸಹ ಜನರು ಪರದಾಡುವ ಸ್ಥಿತಿ ಎದುರಾಗಿದೆ.
Photo Credit : News Kannada

ಚೆನ್ನೈ : ತಮಿಳುನಾಡಿನಲ್ಲಿ ಮಿಚಾಂಗ್‌ ಸೈಕ್ಲೋನ್‌ ಆರ್ಭಟದಿಂದಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವು ಪ್ರದೇಶಗಳಲ್ಲಿ ನಾಲ್ಕೈದು ಅಡಿ ನೀರು ನುಗ್ಗಿದ್ದು, ತುರ್ತು ಸೇವೆ ಹಾಗೂ ಅಗತ್ಯವ ವಸ್ತುಗಳಿಗೂ ಸಹ ಜನರು ಪರದಾಡುವ ಸ್ಥಿತಿ ಎದುರಾಗಿದೆ.

ಈ ಸಂದರ್ಭದಲ್ಲಿ ಇಬ್ಬರು ರಕ್ಷಣಾ ತಂಡದ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿರುವ ಬೀದಿನಾಯಿಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾನೆ.

ಪ್ರವಾಹದಲ್ಲಿ ಸಿಲುಕಿರುವ, ಹಲವು ದಿನಗಳಿಂದ ಆಹಾರ ಸಿಗದೆ ಕಂಗೆಟಿದ್ದ ಶ್ವಾನಗಳನ್ನು ದೋಣಿಯಲ್ಲಿ ಕರೆತರಲಾಗಿದೆ. ಅಷ್ಟೇ ಅಲ್ಲದೇ ಸ್ವತಃ ಅವರು ತಾವೇ ನೀರಿನಲ್ಲಿ ನಿಂತು ದೋಣಿ ಹೊಯ್ಡಾಡದಂತೆ ಸಂಭಾಳಿಸುತ್ತಾ ಸಾಗಿರುವ ವಿಡಿಯೋವನ್ನು ಎಕ್ಸ್‌ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ನಾಯಿಯನ್ನು ರಕ್ಷಿಸುತ್ತಿರುವವರ ನಿಸ್ವಾರ್ಥ ಸೇವೆಗೆ ಮನಸ್ಪೂರ್ವಕವಾಗಿ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕೊಂಡಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು