ಚೆನ್ನೈ : ತಮಿಳುನಾಡಿನಲ್ಲಿ ಮಿಚಾಂಗ್ ಸೈಕ್ಲೋನ್ ಆರ್ಭಟದಿಂದಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಹಲವು ಪ್ರದೇಶಗಳಲ್ಲಿ ನಾಲ್ಕೈದು ಅಡಿ ನೀರು ನುಗ್ಗಿದ್ದು, ತುರ್ತು ಸೇವೆ ಹಾಗೂ ಅಗತ್ಯವ ವಸ್ತುಗಳಿಗೂ ಸಹ ಜನರು ಪರದಾಡುವ ಸ್ಥಿತಿ ಎದುರಾಗಿದೆ.
ಈ ಸಂದರ್ಭದಲ್ಲಿ ಇಬ್ಬರು ರಕ್ಷಣಾ ತಂಡದ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿರುವ ಬೀದಿನಾಯಿಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾನೆ.
ಪ್ರವಾಹದಲ್ಲಿ ಸಿಲುಕಿರುವ, ಹಲವು ದಿನಗಳಿಂದ ಆಹಾರ ಸಿಗದೆ ಕಂಗೆಟಿದ್ದ ಶ್ವಾನಗಳನ್ನು ದೋಣಿಯಲ್ಲಿ ಕರೆತರಲಾಗಿದೆ. ಅಷ್ಟೇ ಅಲ್ಲದೇ ಸ್ವತಃ ಅವರು ತಾವೇ ನೀರಿನಲ್ಲಿ ನಿಂತು ದೋಣಿ ಹೊಯ್ಡಾಡದಂತೆ ಸಂಭಾಳಿಸುತ್ತಾ ಸಾಗಿರುವ ವಿಡಿಯೋವನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ನಾಯಿಯನ್ನು ರಕ್ಷಿಸುತ್ತಿರುವವರ ನಿಸ್ವಾರ್ಥ ಸೇವೆಗೆ ಮನಸ್ಪೂರ್ವಕವಾಗಿ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕೊಂಡಾಡಿದ್ದಾರೆ.
Humanity still alive 👍♥️
Thank you #ChennaiRescue team #CycloneMichaung#ChennaiFloods2023 #ChennaiRains #CycloneMichaung#ChennaiFloods#ChennaiRainpic.twitter.com/Opo1mItvW6
— 𒆜Harry Billa𒆜 (@Billa2Harry) December 5, 2023