ಚೆನ್ನೈ: ಚೆನ್ನೈ-ಕೊಯಮತ್ತೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.
ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಕೋಚ್ಗಳನ್ನು ತಯಾರಿಸಲಾಗಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್ ಈ ವೇಳೆ ಹಾಜರಿದ್ದರು. ಭಾರತೀಯ ರೈಲ್ವೆಯ ಪ್ರಕಾರ, ಹೊಸ ರೈಲು 5 ಗಂಟೆ 50 ನಿಮಿಷಗಳ ಪ್ರಯಾಣ ಅವಧಿಯಲ್ಲಿ ಗಮ್ಯ ಸ್ಥಾನ ತಲುಪಲಿದೆ. ರೈಲಿನ ಎಲ್ಲಾ ಕೋಚ್ಗಳಲ್ಲಿ ಸಿಸಿಟಿವಿ ಮತ್ತು ಸ್ವಯಂಚಾಲಿತ ಬಾಗಿಲು ಹೊಂದಿದೆ.