News Karnataka Kannada
Thursday, May 02 2024
ತಮಿಳುನಾಡು

ತಮಿಳುನಾಡಿನಲ್ಲಿ ಮತ್ತೆ ಚಿಗುರೊಡೆಯಿತೇ ಎಲ್‌ಟಿಟಿಇ: ಮಾದಕ ಸದಸ್ಯರು ಹೇಳಿದ್ರು ಶಾಕಿಂಗ್ ಸುದ್ದಿ

LTTE re-emerges in Tamil Nadu: Here's what drug gang members said
Photo Credit : News Kannada

ಚೆನ್ನೈ: ತಮಿಳುನಾಡು ಪೊಲೀಸರು ನಾಗಪಟ್ಟಣಂ ಪಟ್ಟಣದಲ್ಲಿ 300 ಕೆಜಿ ಮಾದಕವಸ್ತು ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬುಧವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾದ ಗಡಿಯಿಂದ ಮಾದಕವಸ್ತುಗಳನ್ನು ಖರೀದಿಸಿ ಶ್ರೀಲಂಕಾಕ್ಕೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ನಡುವೆಯೇ ಮತ್ತೊಂದು ಭಯಾನಕ ವಿಚಾರ ಬೆಳಕಿಗೆ ಬಂದಿದ್ದು, ತಮಿಳುನಾಡಿನ ನಾಗಪಟ್ಟಣಂ ಮತ್ತು ರಾಮೇಶ್ವರಂ ಕರಾವಳಿಯ ಕೆಲ ಜನರು
ಎಲ್‌ಟಿಟಿಇ ಭಾಗವಾಗಿ ಈ ಮಾದಕ ವಸ್ತು ಜಾಲ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 2021 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಲ್‌ಟಿಟಿಇಯ ಮಾಜಿ ಉನ್ನತ ಕಾರ್ಯಕರ್ತ ಸಂತುಕಮ್ ಅಲಿಯಾಸ್ ಸಬೇಶನನ್ನು ಬಂಧಿಸಿತ್ತು. ಪ್ರಕರಣದ ತನಿಖೆ ನಡೆಸಿದ ತಮಿಳುನಾಡು ಭದ್ರತಾ ಏಜೆನ್ಸಿಗಳು ಸಬೇಶನ್‌ ಶ್ರೀಲಂಕಾದ ‘ಕ್ರಿಮಿನಲ್’ ಅಂಗೋಡ ಲೊಕ್ಕ ಅವರೊಂದಿಗೆ ಸಂಪರ್ಕ ಹೊಂದಿದ್ದ ಎಂಬುದು ದೃಢಪಟ್ಟಿತ್ತು. ಬಂಧಿತರು ಎಲ್‌ಟಿಟಿಇಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ಹಣ ಸಂಗ್ರಹಿಸಲು ಮಾದಕ ದ್ರವ್ಯ ಜಾಲವನ್ನು ಬಳಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾರ್ಚ್ 2021 ರಲ್ಲಿ, ಕೋಸ್ಟ್ ಗಾರ್ಡ್ ಅರಬ್ಬಿ ಸಮುದ್ರದ ಮಿನಿಕಾಯ್ ದ್ವೀಪದ ಬಳಿ ‘ರಾಹಿವಂಶಿ’ ದೋಣಿಯಿಂದ 300 ಕೆಜಿ ಹೆರಾಯಿನ್ ಮತ್ತು ಐದು AK 47 ಅಸಾಲ್ಟ್ ರೈಫಲ್‌ಗಳು ಮತ್ತು 1000 ಪೆಲೆಟ್‌ಗಳನ್ನು ವಶಪಡಿಸಿಕೊಂಡಿದ್ದರು. ಇದೀಗ ಸಿಕ್ಕಿಬಿದ್ದಿರುವ ಮಾದಕವಸ್ತು, ಮತ್ತು ಆರೋಪಿಗಳು ತಮಿಳು ಉಗ್ರರ ಸಂಘಟನೆಯ ಟ್ರಯಲ್‌ ರನ್‌ ರನ್ ಭಾಗವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು