ಚೆನ್ನೈ: ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಆ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶನಿವಾರ ಹೇಳಿದ್ದರು.
ಮುಂದುವರಿದು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ್ದರು. ಈ ಹೇಳಿಕೆ ದೇಶದೆಲ್ಲೆಡೆ ವಿವಾದ ಸೃಷ್ಟಿಸಿತ್ತು. ಇದೀಗ ನಟ ಪ್ರಕಾಶ್ ರಾಜ್ ಕೂಡ ಸನಾತನವನ್ನು ವ್ಯಂಗ್ಯವಾಗಿ ತನಾತನಿ ಎಂದಿದ್ದು ಹಿಂದೂಗಳು ತನಾತನಿಗಳಲ್ಲ, ತನಾತನಿಸ್ ಆಗಿದ್ದಾರೆ. ಸನಾತನಿಗಳು ಮಾನವ ವಿರೋಧಿಗಳು ಎಂದಿದ್ದಾರೆ. ಅಲ್ಲದೆ ನೂತನ ಸಂಸತ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಅವರು ಸೆಂಗೋಲ್ ಅನ್ನು ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್ ಮಠದ ಸ್ವಾಮೀಜಿಗಳಿಂದ ಪಡೆದಿದ್ದರು. ಬಳಿಕ ಸ್ವಾಮೀಜಿಗಳೊಂದಿಗೆ ಫೋಟೋ ಶೂಟ್ ಮಾಡಿಕೊಂಡಿದ್ದರು. ಈ ಫೋಟೋವನ್ನೇ ಪ್ರಕಾಶ್ ರಾಜ್ ಬಳಸಿ ವ್ಯಂಗ್ಯವಾಡಿದ್ದಾರೆ.
ಪ್ರೀತಿಯ ಪ್ರಜೆಗಳೆ .. ಇದು ಭವಿಷ್ಯದ ಸಾಧ್ಯತೆ .. #ತನಾತನಿ ಸಂಸತ್ತು .. ನಿಮಗಿದು ಒಪ್ಪಿಗೆಯೆ #justasking pic.twitter.com/PwcOEAgqfl
— Prakash Raj (@prakashraaj) September 4, 2023