News Karnataka Kannada
Saturday, April 27 2024
ತಮಿಳುನಾಡು

ಸ್ಟಾಲಿನ್‌ ಬಳಿಕ ಸನಾತನ ಧರ್ಮದ ಕುರಿತು ಪ್ರಕಾಶ್‌ ರಾಜ್‌ ವ್ಯಂಗ್ಯ

Rs 100 crore Ponzi scam: ED summons actor Prakash Raj
Photo Credit : Facebook

ಚೆನ್ನೈ: ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಆ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಸಚಿವ ಮತ್ತು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶನಿವಾರ ಹೇಳಿದ್ದರು.

ಮುಂದುವರಿದು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ್ದರು. ಈ ಹೇಳಿಕೆ ದೇಶದೆಲ್ಲೆಡೆ ವಿವಾದ ಸೃಷ್ಟಿಸಿತ್ತು. ಇದೀಗ ನಟ ಪ್ರಕಾಶ್​​ ರಾಜ್​​ ಕೂಡ ಸನಾತನವನ್ನು ವ್ಯಂಗ್ಯವಾಗಿ ತನಾತನಿ ಎಂದಿದ್ದು ಹಿಂದೂಗಳು ತನಾತನಿಗಳಲ್ಲ, ತನಾತನಿಸ್ ಆಗಿದ್ದಾರೆ. ಸನಾತನಿಗಳು ಮಾನವ ವಿರೋಧಿಗಳು ಎಂದಿದ್ದಾರೆ. ಅಲ್ಲದೆ ನೂತನ ಸಂಸತ್‌ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಅವರು ಸೆಂಗೋಲ್ ಅನ್ನು ತಮಿಳುನಾಡಿನ ಶೈವ ಪರಂಪರೆಯ ಅಧೀನಾಮ್‌ ಮಠದ ಸ್ವಾಮೀಜಿಗಳಿಂದ ಪಡೆದಿದ್ದರು. ಬಳಿಕ ಸ್ವಾಮೀಜಿಗಳೊಂದಿಗೆ ಫೋಟೋ ಶೂಟ್‌ ಮಾಡಿಕೊಂಡಿದ್ದರು.  ಈ ಫೋಟೋವನ್ನೇ ಪ್ರಕಾಶ್‌ ರಾಜ್‌ ಬಳಸಿ ವ್ಯಂಗ್ಯವಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು