News Karnataka Kannada
Monday, April 29 2024
ತಮಿಳುನಾಡು

ಕಾವೇರಿ ನೀರಿನ ವಿಚಾರವಾಗಿ ಮತ್ತೆ ನಾಲಿಗೆ ಹರಿಬಿಟ್ಟ ನಟಿ

Actress raises her tongue again on Cauvery water issue
Photo Credit : IANS

ಚೆನ್ನೈ: “ಕರ್ನಾಟಕದಲ್ಲಿ ವಿದ್ಯಾವಂತರು ಸರ್‌ಎಂ ವಿಶ್ವೇಶ್ವರಯ್ಯ ಅವರೇ ಭೂಮಿಯನ್ನು ಬಗೆದು ಕಾವೇರಿ ನೀರನ್ನು ಕಂಡುಹಿಡಿದಿರುವಂತೆ ನಂಬಿದ್ದಾರೆ. ಕರ್ನಾಟಕ ರಾಜಕೀಯ ಪಕ್ಷಗಳು ಕೂಡಾ ಕಾವೇರಿ ನಮ್ಮದೇ ಆಸ್ತಿ ಎನ್ನುವಂತೆ ಜನರನ್ನು ನಂಬಿಸಿದ್ದಾರೆ. ಕಾವೇರಿ ಕರ್ನಾಟಕದವರಿಗೆ ಮಗು, ನಮಗೆ ಅವಳು ತಾಯಿ” ಎಂದು ಕಸ್ತೂರಿ ಶಂಕರ್‌ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದಿಗೆ ಕಸ್ತೂರಿ ಶಂಕರ್‌ ಕಾವೇರಿ ಕುರಿತು ಮಾತನಾಡಿರುವ ವಿಡಿಯೋ ವಿರುದ್ಧ ಕನ್ನಡಿಗರು ಗರಂ ಆಗಿದ್ದಾರೆ. ”ಕಾವೇರಿ ನದಿ ಬಗ್ಗೆ ಎಲ್ಲರೂ ತಿಳಿಯಬೇಕಿರುವುದು ಅತ್ಯವಶ್ಯಕ. ಕಾವೇರಿ ನೀರಿನ ಒಪ್ಪಂದದ ಬಗ್ಗೆ ಕೂಡಾ ಎಲ್ಲರೂ ತಿಳಿದುಕೊಳ್ಳಬೇಕು. ಕಾವೇರಿ ನೀರು ಹುಟ್ಟಿದ ಸ್ಥಳದವರು ಅದನ್ನು ತಮ್ಮ ಸ್ವಂತ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಎಲ್ಲಿಗೆ ಸೇರುವುದೋ ಅವರಿಗೆ ಸ್ವಂತ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.

ಒಪ್ಪಂದದ ಪ್ರಕಾರ ಕಾವೇರಿ ನೀರು ತಮಿಳುನಾಡು, ಕರ್ನಾಟಕ, ಪಾಂಡಿಚೆರಿ, ಕೇರಳ ರಾಜ್ಯಗಳಿಗೆ ಸೇರಬೇಕು. 4 ರಾಜ್ಯಗಳಿಗೂ ಇದರಲ್ಲಿ ಹಕ್ಕಿದೆ. ಅದರಲ್ಲಿ ಶೇ 75ರಷ್ಟು ನೀರು ತಮಿಳುನಾಡಿಗೆ ಸೇರಬೇಕು. . ಕಾವೇರಿ ನದಿಗೆ ಸರ್‌ಎಂ ವಿಶ್ವೇಶ್ವರಯ್ಯ ಅಣೆಕಟ್ಟು ಕಟ್ಟಿದ್ದು, ಆದರೆ ಕರ್ನಾಟಕದಲ್ಲಿ ವಿದ್ಯಾವಂತರು ಕೂಡಾ ಸರ್‌ಎಂ ವಿಶ್ವೇಶ್ವರಯ್ಯ ಅವರೇ ಭೂಮಿಯನ್ನು ಬಗೆದು ಕಾವೇರಿ ನೀರನ್ನು ಕಂಡುಹಿಡಿದಿರುವಂತೆ ನಂಬಿದ್ದಾರೆ. ಕಾವೇರಿ ಕರ್ನಾಟಕದವರಿಗೆ ಮಗು, ನಮಗೆ ಅವಳು ತಾಯಿ” ಎಂದು ಕಸ್ತೂರಿ ಶಂಕರ್‌ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು