ತಮಿಳುನಾಡು : ನಿಫಾ ವೈರಸ್ ಅಟ್ಟಹಾಸ ಕೇರಳದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ, ತಮಿಳುನಾಡಿನಲ್ಲಿಯೂ ನಿಫಾ ಭೀತಿ ಎದುರಾಗಿದೆ. ಈ ಹಿನ್ನೆಲೆ ಹಬ್ಬ, ಸಭೆ, ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅ.31ರವೆರೆಗೂ ಸಿಎಂ ಎಂ. ಕೆ. ಸ್ಟಾಲಿನ್ ನಿಷೇಧ ವಿಸ್ತರಿಸಿದ್ದಾರೆ.
“ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಹಾಗೂ ನಿಫಾ ವೈರಸ್ ಏಕಾಏಕಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಹೇರಲಾಗಿದೆ. ಮೂರನೆ ಅಲೆಯ ತೀವ್ರತೆಯನ್ನು ತಡೆಗಟ್ಟಲು ಪ್ರತಿಯೊಬ್ಬರು ಹಬ್ಬ-ಹರಿದಿನಗಳನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿ” ಎಂದು ಸಾರ್ವಜನಿಕರಲ್ಲಿ ಸ್ಟಾಲಿನ್ ವಿನಂತಿಸಿದ್ದಾರೆ.
ಅಕ್ಟೋಬರ್ 31ರವರೆಗೆ ತಮಿಳುನಾಡಿನಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ, ಸಮಾವೇಶ, ದಾರ್ಮಿಕ ಕೂಟ ಮಾಡುವಂತಿಲ್ಲ. ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.