ತಮಿಳುನಾಡು : ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಅನ್ನೋ ಮಾತು ಶಶಿಕಲಾ ನಟರಾಜನ್ ಗೆ ಈಗ ಅನ್ವಯಿಸುತ್ತೆ ಅನ್ಸುತ್ತೆ. ಯಾಕಂದ್ರೆ ತನ್ನ ಬಿಡುಗಡೆಯಾದ ಬಳಿಕ ಜೈಲಿನಲ್ಲಿರುವ ತಲೈವಿ ದತ್ತು ಪುತ್ರನನ್ನೇ ಆಕೆ ಮರೆತಂತಿದೆ. ಈ ಮಧ್ಯೆ ಕೊನೆಗೂ ಸುಧಾಕರನ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕಳೆದ ಐದು ವರ್ಷದಿಂದ ಸೆರೆವಾಸದಲ್ಲಿರೋ ಜಯಲಲಿತಾ ದತ್ತುಪುತ್ರನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸುಧಾಕರನ್ ಗೆ ಜೈಲಿಂದ ಮುಕ್ತಿ ಸಿಕ್ಕಿದ್ದು, ಇದೇ ಶನಿವಾರ 16ನೇ(ನಾಳೆ) ತಾರೀಖಿನಂದೇ ಜೈಲಿಂದ ರಿಲೀಸ್ ಆಗ್ತಿದ್ದಾರೆ. ಹತ್ತು ಕೋಟಿ ದಂಡ ಕಟ್ಟದೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲಲ್ಲೇ ಶಿಕ್ಷೆ ಅನುಭವಿಸ್ತಿದ್ದ ಸುಧಾಕರನ್ ಬಿಡುಗಡೆಗೆ ಸಿದ್ದತೆ ನಡೆಸಲಾಗಿದೆ. ಆದ್ರೆ ಚಿನ್ನಮ್ಮ ಬಿಡುಗಡೆಯಾದ ಬಳಿಕ ಯಾರ ಭೇಟಿಯೂ ಇಲ್ಲ, ಭರವಸೆಯ ಪೋನ್ ಸಹ ಇಲ್ಲ. ಜೊತೆಗೆ ಬಿಡುಗಡೆಯಾದ್ರೂ ಸುಧಾಕರನ್ಗಿಲ್ಲ ಕುಟುಂಬಸ್ಥರ ಸ್ವಾಗತವಿಲ್ಲ ಎನ್ನಲಾಗಿದೆ.