News Karnataka Kannada
Monday, April 29 2024
ತಮಿಳುನಾಡು

ತಮಿಳುನಾಡು: ಬಿಜೆಪಿಯ ಎಸ್‌ಸಿ/ಎಸ್‌ಟಿ ಮುಖಂಡನ ಕೊಲೆ

Untitled 181
Photo Credit :

ತಮಿಳುನಾಡು: ಬಿಜೆಪಿಯ ಎಸ್‌ಸಿ/ಎಸ್‌ಟಿ ಮುಖಂಡ ಬಾಲಚಂದರ್ (30) ನನ್ನು ಮೂವರು ದುಷ್ಕರ್ಮಿಗಳು ಮಂಗಳವಾರ ತಮಿಳುನಾಡಿನ ಚಿಂತಾದ್ರಿಪೇಟೆಯಲ್ಲಿ ಕೊಂದಿದ್ದಾರೆ.

ಬಾಲಚಂದರ್ ಅವರು ಬಿಜೆಪಿಯ ಎಸ್‌ಸಿ/ಎಸ್‌ಟಿ ಸೆಂಟ್ರಲ್ ಚೆನ್ನೈ ಮುಖ್ಯಸ್ಥರಾಗಿದ್ದರು. ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದರಿಂದ ಭದ್ರತೆಗಾಗಿ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಒದಗಿಸಲಾಗಿತ್ತು.

ಬಾಲಚಂದರ್ ಸಾಮಿನಾಯಕನ್ ರಸ್ತೆಯಲ್ಲಿ ನಿಂತು ಬೇರೆಯವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಅವರ ಗನ್‌ಮ್ಯಾನ್‌ ಚಹಾ ಕುಡಿಯಲು ಹೋಗಿದ್ದರು. ಅದೇ ಸಮಯದಲ್ಲಿ, ಮೂವರು ವ್ಯಕ್ತಿಗಳು ಅವನನ್ನು ಸುತ್ತುವರೆದು ಬರ್ಬರವಾಗಿ ಕೊಂದಿದ್ದಾರೆ.

ಬಾಲಚಂದರ್ ಅವರ ಪಿಎಸ್‌ಒ ಆಗಿದ್ದ ಬಾಲಕೃಷ್ಣನ್ ಹಿಂತಿರುಗುವ ಮುನ್ನವೇ ಗ್ಯಾಂಗ್ ದ್ವಿಚಕ್ರ ವಾಹನಗಳನ್ನು ಹತ್ತಿ ಸ್ಥಳದಿಂದ ಪರಾರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್​ ಆಯುಕ್ತ ಶಂಕರ್​ ಜಿವಾಲ್​, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು