ನವದೆಹಲಿ: 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾ ಅವರನ್ನು ಟಾಡಾ (ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ಕಾಯ್ದೆ) ನ್ಯಾಯಾಲಯ ಇಂದು(ಫೆ.29) ಖುಲಾಸೆಗೊಳಿಸಿದೆ.
ಇನ್ನು ಈತನನ್ನು 2013ರಲ್ಲಿ ಭಾರತ-ನೇಪಾಳ ಗಡಿಯ ಬನ್ಬಾಸಾದಲ್ಲಿ ಬಂಧಿಸಲಾಗಿತ್ತು. ಹಲವಾರು ಬಾಂಬ್ ಸ್ಫೋಟಗಳ ಆರೋಪಗಳ ಹೊರತಾಗಿಯೂ, ಅವರ ವಿರುದ್ಧದ ನಾಲ್ಕು ಪ್ರಕರಣಗಳಲ್ಲಿ 2016 ರಲ್ಲಿ ದೆಹಲಿ ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದಿದ್ದ.
ಆರೋಪಗಳನ್ನು ರೂಪಿಸಲು ಅವರ ವಿರುದ್ಧ ಗಮನಾರ್ಹ ಪುರಾವೆಗಳನ್ನು ತರಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ. ಆದಾಗ್ಯೂ, ಲಷ್ಕರ್-ಎ-ತೈಬಾ ಭಯೋತ್ಪಾದಕನ ವಿರುದ್ಧ ಹಲವಾರು ಪ್ರಕರಣಗಳು ಬಾಕಿ ಇರುವ ಕಾರಣ ಸದ್ಯ ಲಾಕಪ್ನಲ್ಲಿಯೇ ಉಳಿದಿದ್ದಾನೆ.