ನವದೆಹಲಿ: ಹೊಸ ಸಂಸತ್ತಿನಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಹಳೆಯ ಕಟ್ಟಡದಲ್ಲಿ ಸಂಸತ್ತಿನ ಕಲಾಪ ಮುಕ್ತಾಯಗೊಂಡ ಬಳಿಕ ಮಂಗಳವಾರ ಮಧ್ಯಾಹ್ನ 1:15 ರಿಂದ ಹೊಸ ಸಂಸತ್ತಿನ ಕಟ್ಟಡದಲ್ಲಿ ಉಭಯ ಸದನಗಳ ಕಲಾಪಗಳು ಪ್ರಾರಂಭವಾಗುತ್ತವೆ.
ಬೆಳಿಗ್ಗೆ 9:30 ಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರ ಗುಂಪು ಫೋಟೋ ಸೆಷನ್ ನಂತರ, 11 ಗಂಟೆಗೆ ಸೆಂಟ್ರಲ್ ಹಾಲ್ನಲ್ಲಿ “ಭಾರತದ ಸಂಸತ್ತಿನ ಪರಂಪರೆ ಎಂಬ ಶೀರ್ಷಿಕೆಯ ಕಾರ್ಯಕ್ರಮ ನಡೆಯಲಿದೆ. ರಾಜ್ಯಸಭೆಯ ಹಿರಿಯ ಸಂಸದರಾಗಿರುವ ಮನಮೋಹನ್ ಸಿಂಗ್ ಮತ್ತು ಲೋಕಸಭೆಯಲ್ಲಿ ಅತಿ ಹಿರಿಯ ಸಂಸದರಾಗಿರುವ ಮೇನಕಾ ಗಾಂಧಿ ಅವರಿಗೆ ಸಮಾರಂಭದಲ್ಲಿ ಮಾತನಾಡುವ ಗೌರವ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿಯ ಪ್ರಕಾರ, ಈ ಕಾರ್ಯಕ್ರಮವು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡುತ್ತದೆ. ಇದರ ನಂತರ, ಸಂಸತ್ತಿನ ಕಾರ್ಯಚಟುವಟಿಕೆಯನ್ನು ಹಳೆಯ ಸಂಸತ್ ಭವನದಿಂದ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ.