ರಾಜಸ್ಥಾನ: ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರನ್ನು ಇಡಲಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತಿಳಿಸಿದ್ದಾರೆ.
ಒಟ್ಟು ಮೂರು ಹುಲಿ ಮರಿಗಳು ಜನಿಸಿದ್ದು, ಇನ್ನೆರಡು ಹುಲಿ ಮರಿಗೆ ಚಿರಂಜೀವಿ ಮತ್ತು ಚಿರಾಯು ಎಂದು ನಾಮಕರಣ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್ ಗೆಹಲೋತ್, ‘ಅಂತರರಾಷ್ಟ್ರೀಯ ಹುಲಿ ದಿನವನ್ನು ಹೆಚ್ಚು ಐತಿಹಾಸಿಕವಾಗಿ ಆಚರಿಸಲು ನಿರ್ಧರಿಸಿದ್ದು, ರಣಥಂಬೋರ್ನಲ್ಲಿ ಜನಿಸಿದ ಹೆಣ್ಣು ಹುಲಿ ಮರಿಗೆ ಪ್ಯಾರಾಲಿಂಪಿಕ್ ವಿಜೇತೆ ಅವನಿ ಲೆಖರಾ ಅವರ ಹೆಸರಿಡಲಾಗಿದೆ. ಈ ಹಿಂದೆ ಜನಿಸಿದ ಹೆಣ್ಣು ಮರಿಗೆ(ಟಿ-17) ಕಾಮೆನ್ವೆಲ್ತ್ನ ಚಿನ್ನದ ಪದಕ ವಿಜೇತೆ ಕೃಷ್ಣ ಪೂನಿಯಾ ಅವರ ಹೆಸರನ್ನು ಇಡಲಾಗಿತ್ತು’ ಎಂದರು.
2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಲೆಖರಾ ಅವರು ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು.
अंतरराष्ट्रीय बाघ दिवस को और ऐतिहासिक बनाने के लिए रणथंभौर की बाघिन टी—111 के दो वर्ष के हो चुके तीन शावकों (दो बाघ एवं एक बाघिन) का नामकरण ‘चिंरजीवी’ ‘चिरायु’ एवं ‘अवनी’ किया गया है। 2010 में कॉमनवेल्थ गेम्स में स्वर्ण पदक विजेता श्रीमती कृष्णा पूनिया के नाम पर बाघिन टी-17 का… pic.twitter.com/HhPxb6mT0k
— Ashok Gehlot (@ashokgehlot51) July 29, 2023