ಜೈಪುರ್: ರಾಜಸ್ಥಾನ ಸಿಎಂ ಅಶೋಕ್ ಗೆಹಲೋಟ್ ಅಧಿವೇಶದಲ್ಲಿ ಈ ವರ್ಷದ ಬಜೆಟ್ ಪ್ರತಿಗಳ ಬದಲಿಗೆ ಈ ಹಿಂದಿನ ಬಜೆಟ್ ಪ್ರತಿಗಳನ್ನು ಓದುವ ಮೂಲಕ ನಗೆಪಾಟಲಿಗೀಡಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ತಿಳಿಸಿದ್ದಾರೆ.
ಸಿಎಂ ಅಶೋಕ್ 8 ನಿಮಿಷಗಳ ಕಾಲ ಈ ಹಿಂದಿನ ಬಜೆಟ್ ಪ್ರತಿಗಳನ್ನು ಓದಿದರು. ಪೂರ್ವ ಪರಿಶೀಲನೆಯಿಲ್ಲದೆ ಮುಖ್ಯಮಂತ್ರಿಯವರು ಹಿಂದಿನ ಬಜೆಟ್ಪ್ರತಿಗಳನ್ನು ಓದಿರುವುದು ಹಾಸ್ಯಾಸ್ಪದ. ಇದು ರಾಜಸ್ಥಾನ ಸರ್ಕಾರದ ಆಡಳಿತ ವೈಖರಿಗೆ ಕನ್ನಡಿಯಾಗಿದೆ. ಇಂತಹ ಸರ್ಕಾರದಿಂದ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.