ಜೈಪುರ: ಅಜ್ಮೀರ್ನಲ್ಲಿ ಸ್ವಿಂಗ್ ರೈಡ್ ದುರಂತದಲ್ಲಿ 15ಮಂದಿಗೆ ಗಾಯಗಳಾಗಿದ್ದು, ಘಟನೆಯ ಕುರಿತು ರಾಜಸ್ಥಾನದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಸ್ವಿಂಗ್ ರೈಡ್ ಏರಿಳಿಕೆ ಸವಾರಿ ಮಾಡುತ್ತಿದ್ದಾಗ ಅದು ಕೆಳಮುಖವಾಗಿ ಪ್ರಯಾಣಿಸುವಾಗ ಕುಸಿದಿದೆ. ತಿರುಗುವ ತೊಟ್ಟಿಲು ನೆಲಕ್ಕೆ ಬಿದ್ದ ನಂತರ ಎಲ್ಲೆಡೆ ಅವ್ಯವಸ್ಥೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಂಜೆ 6.15ರ ಸುಮಾರಿಗೆ 25 ಮಂದಿ ಏರಿಳಿಕೆಯಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಕೇಬಲ್ ತುಂಡಾಗಿ ಎತ್ತರದಿಂದ ಕೆಳಗೆ ಬಿದ್ದಿದೆ. ಏಳು ಮಕ್ಕಳು ಸೇರಿದಂತೆ 15 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜೆಎಲ್ಎನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿವಿಲ್ ಲೈನ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ನಂತರ ದಿಢೀರ್ ಕೋಲಾಹಲ ಉಂಟಾಯಿತು. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ರೈಡ್ ಆಪರೇಟರ್ ಮತ್ತು ಆಯೋಜಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ಜಾತ್ರೆ ಅಂಗವಾಗಿ ‘ದಬಾರ್ ಡಿಸ್ನಿಲ್ಯಾಂಡ್’ ಹೆಸರಿನ ಸ್ಥಳೀಯ ಸಂಸ್ಥೆಯು ಫೆಬ್ರವರಿ 27 ರಂದು ಅಜ್ಮೀರ್ನ ಕುಂದನ್ ನಗರ ಪ್ರದೇಶದಲ್ಲಿ ಸ್ವಿಂಗ್ ಮತ್ತು ರೈಡ್ಗಳನ್ನು ಸ್ಥಾಪಿಸಿತ್ತು. ಕೇಬಲ್ ತುಂಡಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಸಾಯಿಜ್ಞಾನ ಪಬ್ಲಿಕ್ ಶಾಲೆಯು ಪ್ರಸಕ್ತ ಸಾಲಿನ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ 100ಕ್ಕೆ 100 ರಷ್ಟು ಫಲಿತಾಂಶ ಪಡೆದಿದೆ.…
ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.
ಸಾಣೂರಿನ ಲೈನ್ ಮ್ಯಾನ್ ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…
ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…
ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…