ರಾಜಸ್ಥಾನ : 16 ವರ್ಷದ ಬಾಲಕಿಯೊಬ್ಬಳು ಮಲವಿಸರ್ಜನೆ ಮಾಡಲು ಹೋದಾಗ ಆಕೆಯ ನೆರೆ ಮನೆಯಾತ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಭರತ್ಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಆಕೆ ತನ್ನ ಮನೆಯವರಿಗೆ ತಿಳಿಸಿದಾಗ, ಅವರು ಅವನನ್ನು ವಿಚಾರಿಸಲು ಆರೋಪಿಯ ಮನೆಗೆ ಹೋಗಿದ್ದರು.ನಂತರ ಬಾಲಕಿಯ ಮನೆಯವರು ಆರೋಪಿ ವಿರುದ್ಧ ಚಿಕ್ಕಸಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಾಲಕಿ, “ನಾನು ಸಂಜೆ ಕಾಡಿಗೆ ಹೋಗಿದ್ದೆ, ನನ್ನ ನೆರೆಹೊರೆಯವರು ನನಗೆ ಹಣ ನೀಡುವ ನೆಪದಲ್ಲಿ ನನ್ನನ್ನು ಕರೆದರು. ನಂತರ ಅವನು ನನ್ನನ್ನು ಹಿಡಿದು ಅತ್ಯಾಚಾರ ಮಾಡಿದ್ದಾನೆ ಮತ್ತು ಥಳಿಸಿದರು ಎಂದು ತಿಳಿಸಿದ್ದಾಳೆ ಎನ್ನಲಾಗಿದೆ.
ಠಾಣಾಧಿಕಾರಿ ಗಂಗಾ ಸಹಾಯ್ ಮೀನಾ ಮಾತನಾಡಿ, ‘ಎರಡೂ ಕಡೆಯಿಂದ ದೂರು ದಾಖಲಾಗಿದೆ. ಒಬ್ಬರು ಭೂಮಿ ವಿಚಾರಕ್ಕೆ ಹೋರಾಟ, ಜಗಳ ನಡೆದಿದೆ ಎಂದು ಹೇಳಿದರೆ, ಇನ್ನೊಂದು ಕುಟುಂಬ ಆ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯದ ಪ್ರಕರಣ ನಡೆದಿರುವುದಾಗಿ ಆರೋಪಿಸಿದ್ದಾರೆ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ” ಎಂದರು.