News Karnataka Kannada
Tuesday, May 07 2024
ದೇಶ

ದೇವಾಲಯ ಪ್ರವೇಶಿಸದಂತೆ ತಡೆ: ರಾಹುಲ್ ಗಾಂಧಿ ಅಸಮಾಧಾನ

Raga
Photo Credit : News Kannada

 ಅಸ್ಸಾಂ: ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ವೈಷ್ಣವ ಸನ್ಯಾಸಿ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳಕ್ಕೆ ಹೋಗುತ್ತಾರೆ. ಆದರೆ ನಾನು ಮಾತ್ರ ಹೋಗಬಾರದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ಹೊರ ಹಾಕಿದರು.

ಶಂಕರದೇವರ ಜನ್ಮಸ್ಥಳಕ್ಕೆ ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ಮಾರ್ಗ ಮಧ್ಯೆ ಹೈಬರ್ಗಾಂವ್‌ನಲ್ಲಿ ತಡೆಹಿಡಿಯಲಾಯಿತು. ಇದನ್ನು ವಿರೋಧಿಸಿ ರಾಹುಲ್‌ ಗಾಂಧಿ, ಹಿರಿಯ ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರೊಂದಿಗೆ ಅಲ್ಲಿಯೇ ಧರಣಿ ನಡೆಸಿದರು. ಪಕ್ಷದ ಸಂಸದ ಗೌರವ್‌ ಗೊಗೊಯ್‌ ಮತ್ತು ಬಟದ್ರಾವ ಶಾಸಕ ಸಿಬಾಮೋನಿ ಬೋರಾ ಅವರು ರಾಹುಲ್ ಗಾಂಧಿ ಪರವಾಗಿ ಶಂಕರದೇವರ ಜನ್ಮಸ್ಥಳಕ್ಕೆ ತೆರಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ‘ನಾನು ಶಂಕರದೇವರ ತತ್ವಶಾಸ್ತ್ರವನ್ನು ನಂಬುತ್ತೇನೆ. ಅಲ್ಲದೆ, ನಾವು ಜನರನ್ನು ಒಗ್ಗೂಡಿಸುವುದರಲ್ಲಿ ನಂಬಿಕೆ ಇಟ್ಟಿದ್ದೇವೆ, ದ್ವೇಷವನ್ನು ಹರಡುವುದರಲ್ಲಿ ಅಲ್ಲ’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು