News Karnataka Kannada
Monday, May 06 2024
ಪಂಜಾಬ್

ಮತ್ತೊಮ್ಮೆ ಆರಂಭವಾಗುತ್ತ ದೆಹಲಿ ರೈತ ಚಳುವಳಿ?

Delhi farmers' movement to begin again?
Photo Credit : News Kannada

ಚಂಡೀಗಢ: ರೈತರ ಐತಿಹಾಸಿಕ ‘ಡಿಲ್ಲಿ ಚಲೋ’ ಆಂದೋಲನದ ಮೂರನೇ ವರ್ಷಾಚರಣೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಯ ಭರವಸೆ ಮುಂತಾದ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿಯಲ್ಲಿ ರೈತ ಸಂಘಗಳು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ.

ಮೂರು ದಿನಗಳ ಪ್ರತಿಭಟನೆಯ ಭಾಗವಾಗಿ ಪಂಜಾಬ್ ಮತ್ತು ಹರಿಯಾಣದ ಸಾವಿರಾರು ರೈತರು ಭಾನುವಾರ ರ‍್ಯಾಲಿ ಆರಂಭಿಸಿದ್ದಾರೆ. ನಾವು ದೂರದ ಪ್ರಯಾಣಕ್ಕೆ ಸಿದ್ಧರಾಗಿ ಬಂದಿದ್ದೇವೆ ಎಂದು ಸರ್ಕಾರಗಳನ್ನು ರೈತರನ್ನು ಎಚ್ಚರಿಸಿದ್ದಾರೆ. ಅನೇಕರು ತಮ್ಮ ಟ್ರ್ಯಾಕ್ಟರ್-ಟ್ರೇಲರ್‌ಗಳಲ್ಲಿ ತರಕಾರಿಗಳು, ಹಿಟ್ಟು ಮತ್ತು ಉದ್ದಿನ ಚೀಲ ಮತ್ತು ಅಡುಗೆ ಎಣ್ಣೆ ತಂದಿದ್ದಾರೆ. ರೈತರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸೇರಿದ್ದಾರೆ. ಪ್ರತಿಭಟನಾ ನಿರತ ರೈತರು ಪಂಜಾಬ್‌ನ ಮೊಹಾಲಿ ಮತ್ತು ಹರಿಯಾಣದ ಪಂಚಕುಲದ ಗಡಿಗಳಲ್ಲಿ ಜಮಾಯಿಸುತ್ತಿದ್ದಾರೆ.

ಈ ನಡುವೆ ಚಂಡೀಗಢಕ್ಕೆ ರೈತರ ಪ್ರವೇಶವನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.
ಸಮಾವೇಶಗೊಂಡ ರೈತರು ಟೆಂಟ್‌ ಹಾಕಿ ಅಡುಗೆ ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದ ಕೇಂದ್ರ ಸರ್ಕಾರದ ವಿರುದ್ಧ ರೈತ ಸಂಘಗಳು ರಾಜಭವನದತ್ತ ಪ್ರತಿಭಟನೆ ನಡೆಸಲಿವೆ ಎಂದು ಎಸ್‌ಕೆಎಂನ ಸಮನ್ವಯ ಸಮಿತಿ ಸದಸ್ಯ ದರ್ಶನ್ ಪಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಗತ್ಯ ಬಿದ್ದರೆ ಅನಿರ್ದಿಷ್ಟಾವಧಿವರೆಗೆ ಧರಣಿ ನಡೆಸುವುದಾಗಿ ಅವರು ಹೇಳಿದ್ದಾರೆ.

ನಾವು ಎರಡು ತಿಂಗಳವರೆಗೆ ಅಗತ್ಯವಿರುಷ್ಟು ಪಡಿತರ ಕೊಂಡೊಯ್ಯುತ್ತಿದ್ದೇವೆ ಎಂದು ಖನ್ನಾ ಪಟ್ಟಣದ ರೈತ ಸರ್ಬ್ಜಿತ್ ಸಿಂಗ್ ಹೇಳಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಕೀಟಗಳ ದಾಳಿ ಮತ್ತು ಪ್ರವಾಹದಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವ ರೈತ ಸಂಘಗಳು ಸರ್ಕಾರವನ್ಜು ಒತ್ತಾಯಿಸಿವೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಚಂಡೀಗಢ ಗಡಿಯುದ್ದಕ್ಕೂ ಕೆಲವು ರಸ್ತೆ ಸಂಚಾರ ತಪ್ಪಿಸಲು ಪಂಜಾಬ್ ಮತ್ತು ಹರಿಯಾಣ ಪೊಲೀಸರು ಪ್ರಯಾಣ ಸಲಹೆಯನ್ನು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು