ಪಂಜಾಬ್: ಪಂಜಾಬ್ ರಾಜ್ಯವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿಸುವುದೇ ನಮ್ಮ ಗುರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಂಜಾಬ್ ಮತದಾರರಿಗೆ ಆಶ್ವಾಸನೆ ನೀಡಿದ್ದಾರೆ.ಅಲ್ಲಿಂದಲೇ ಪಂಜಾಬ್ನೊಳಕ್ಕೆ ಮಾದಕ ವಸ್ತುಗಳು ಕಾಲಿಡುತ್ತಿವೆ. ಈ ಸಾಮಾಜಿಕ ಪಿಡುಗನ್ನು ತೊಲಗಿಸಿ, ಪಂಜಾಬ್ನಲ್ಲಿ ಶಾಂತಿ, ಸ್ಥಿರತೆ, ಸೌಹಾರ್ದತೆ ಹಾಗೂ ಭದ್ರತೆಯನ್ನು ಕಲ್ಪಿಸಲು ಎನ್ಡಿಎ ಸರ್ಕಾರ ಪ್ರಯತ್ನಿಸುತ್ತಿದೆ.
ಪಟಿಯಾಲಾದಲ್ಲಿ ಭಾನುವಾರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, “ಪಂಜಾಬ್ನ ಒಂದು ಭಾಗ, ಪಾಕಿಸ್ತಾನದ ಗಡಿಯೊಂದಿಗೆ ಬೆಸೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಒಂದು ಅವಕಾಶ ಕೊಡಿ. ಕೇಂದ್ರದ ಮಾದಕದ್ರವ್ಯ ನಿಯಂತ್ರಣ ಸಂಸ್ಥೆಯ ಸಹಯೋಗದೊಂದಿಗೆ ನಾವು ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡುತ್ತೇವೆ” ಎಂದರು.
ಪಂಜಾಬ್ನಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ, ಜಲಂಧರ್, ಲೂಧಿಯಾನಾ, ಅಮೃತಸರ, ಪಟಿಯಾಲಾದಲ್ಲಿ ಮಾದಕದ್ರವ್ಯ ನಿಯಂತ್ರಣ ಸಂಸ್ಥೆಯ ನಾಲ್ಕು ಶಾಖೆಗಳನ್ನು ತೆರೆಯುತ್ತೇವೆ ಎಂದು ತಿಳಿಸಿದರು.
“ಪಂಜಾಬ್ನಲ್ಲಿ ಸಿಖ್ಖರನ್ನು, ಹಿಂದೂಗಳನ್ನು ಬಲವಂತವಾಗಿ ಅನ್ಯ ಧರ್ಮಕ್ಕೆ ಮತಾಂತರ ಮಾಡುವ ಮತ್ತೊಂದು ಸಮಸ್ಯೆಯಿದೆ. ಇದನ್ನು ತಡೆಗಟ್ಟಲು ಆಪ್ ಹಾಗೂ ಕಾಂಗ್ರೆಸ್ ಸರ್ಕಾರಗಳಿಗೆ ಸಾಧ್ಯವಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಇದನ್ನು ತಡೆಯುತ್ತೇವೆ” ಎಂದು ತಿಳಿಸಿದರು.
ಇದೇ ವೇಳೆ, ಮಾಜಿ ಸಿಎಂ ಅಮರಿಂದರ್ ಸಿಂಗ್ರನ್ನು ಶ್ಲಾ ಸಿದ ಅವರು, “ರಾಷ್ಟ್ರದ ಭದ್ರತೆಯ ವಿಚಾರಕ್ಕೆ ಬಂದಾಗ ಅಮರಿಂದರ್ ಅವರು ತೋರುವ ಧೈರ್ಯವನ್ನು ನಾವೆಲ್ಲರೂ ಮೆಚ್ಚಲೇಬೇಕು. ಆದರೆ, ಇಂಥ ನಾಯಕನನ್ನು ಕಾಂಗ್ರೆಸ್ ನಿರ್ಲಕ್ಷಿಸಿತು” ಎಂದರು.