News Karnataka Kannada
Monday, April 29 2024
ಪಂಜಾಬ್

ಚಂಡೀಗಢವನ್ನು ಪಂಜಾಬ್‌ ಗೆ ವರ್ಗಾಯಿಸಿ: ಸದನದಲ್ಲಿ ನಿರ್ಣಯ ಮಂಡಿಸಿದ ಭಗವಂತ್ ಮಾನ್

Chandigarh Chief Minister Bhagwant Mann to tie the knot tomorrow at his residence in Chandigarh.
Photo Credit :

ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ ಚಂಡೀಗಢವನ್ನು ತಕ್ಷಣವೇ ಪಂಜಾಬ್‌ ರಾಜ್ಯಕ್ಕೆ ವರ್ಗಾಯಿಸುವಂತೆ ವಿಧಾನಸಭೆಯಲ್ಲಿ ಶುಕ್ರ ವಾರ ನಿರ್ಣಯವನ್ನು ಮಂಡಿಸಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗಢವು ಪಂಜಾಬ್‌ ಹಾಗೂ ಹರಿಯಾಣಗಳ ರಾಜಧಾನಿಯಾಗಿದೆ. ಚಂಡೀಗಢವು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಲ್ಲಿನ ಉದ್ಯೋಗಿಗಳಿಗೆ ಇನ್ಮುಂದೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು) ಯ ಸೇವಾ ನಿಯಮಗಳು ಅನ್ವಯಗೊಳ್ಳುತ್ತವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದರು.

ಈ ಕುರಿತು ಇಂದು ಸದನದಲ್ಲಿ ನಿರ್ಣಯವನ್ನು ಮಂಡಿಸಿದ ಸಿಎಂ ಭಗವಂತ್ ಮಾನ್, ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವಂತೆ ಕೇಂದ್ರ – ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ ನಿಯಮಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ಪಂಜಾಬ್ ರಾಜ್ಯವನ್ನು 1966ರಲ್ಲಿ ಮರುಸಂಘಟಿಸಿ ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ಘೋಷಿಸಿಸಲಾಯಿತು. ಚಂಡೀಗಢವನನು ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಯಿತು. ದೇಶದಲ್ಲಿ ಈ ಹಿಂದಿನ ಎಲ್ಲಾ ಪೂರ್ವನಿದರ್ಶನಗಳಲ್ಲಿ ರಾಜ್ಯವನ್ನು ವಿಭಜಿಸಿದಾಗ ರಾಜಧಾನಿ ಮಾತೃರಾಜ್ಯದಲ್ಲಿ ಉಳಿದಿರುವುದನ್ನು ಗಮನಿಸಬಹುದಾಗಿದೆ. ಆದ್ದರಿಂದ ಚಂಡೀಗಢವನ್ನು ಪಂಜಾಬ್‌ ರಾಜ್ಯಕ್ಕೆ ವರ್ಗಾಯಿಸಲು ಪಂಜಾಬ್‌ ತನ್ನ ಹಕ್ಕು ಮಂಡಿಸಲಿದೆ ಎಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಕೈಗೊಳ್ಳಲಾಗಿದೆ.

ಚಂಡೀಗಢದ ಆಡಳಿತವನ್ನು ಪಂಜಾಬ್ ಮತ್ತು ಹರಿಯಾಣದ ಅಧಿಕಾರಿಗಳು 60:40 ಅನುಪಾತದಲ್ಲಿ ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ಈ ನಿಯಮಕ್ಕೆ ವಿರುದ್ಧವಾಗಿ ಚಂಡೀಗಢಕ್ಕೆ ಹೊರಗಿನ ಅಧಿಕಾರಿಗಳನ್ನು ನಿಯೋಜಿಸಿದೆ ಮತ್ತು ಚಂಡೀಗಢ ಆಡಳಿತದ ನೌಕರರಿಗೆ ಕೇಂದ್ರ ನಾಗರಿಕ ಸೇವಾ ನಿಯಮಗಳನ್ನು ಅನ್ವಯಿಸುತ್ತಿದೆ. ಇದು ಹಿಂದಿನ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಮಾನ್‌ ನಿರ್ಣಯದಲ್ಲಿ ಪ್ರಸ್ತಾಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು