ಕೋವಿಡ್ ಸಮಯದಲ್ಲಿ ಅನೇಕರಿಗೆ ಸಕಾಲಕ್ಕೆ ನೆರವು ನೀಡುವ ಮೂಲಕ ರಿಯಲ್ ಹೀರೋ ಆದವರು ಬಾಲಿವುಡ್ ನಟ ಸೋನ್ ಸೂದ್ . ತಮ್ಮ ಫೌಂಡೇಷನ್ ಮೂಲಕ ತಮ್ಮ ಸಮಾಜ ಮುಖಿ ಕೆಲಸಗಳನ್ನು ಸೋನು ಸೂದ್ ಇನ್ನೂ ಮುಂದುವರೆಸಿ ಅನೇಕರ ಪಾಲಿಗೆ ಆಸರೆ ಆಗಿದ್ದಾರೆ.
ಅವರ ಮಾನವೀಯತೆ ಗುಣಕ್ಕೆ ಇಡೀ ದೇಶದ ಜನರು ಶ್ಲಾಘನೆ ವ್ಯಕ್ತಪಡಿಸಿದರು. ಇದೀಗ ಮತ್ತೊಮ್ಮೆ ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನ ಪ್ರಾಣ ರಕ್ಷಣೆ ಮಾಡುವ ಮೂಲಕ ಆಪತ್ಬಾಂಧವ ಆಗಿದ್ದಾರೆ. ಪಂಜಾಬ್ನ ಮೋಗಾದಲ್ಲಿ ಗಂಭೀರ ಕಾರು ಅಪಘಾತದಲ್ಲಿ ಸಿಲುಕಿದ ಯುವಕನನ್ನು ಕಂಡ ತಕ್ಷಣ ಅವರ ಪ್ರಾಣ ರಕ್ಷಣೆಗೆ ಧಾವಿಸಿದ್ದಾರೆ. ಆತನ ವಿಡಿಯೋವನ್ನು ಅವರ ಚಾರಿಟಿ ಫೌಂಡೇಶನ್ ಪೇಜ್ನಲ್ಲಿ ಹಂಚಿಕೊಂಡಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಪಂಜಾಬ್ನ ಮೋಗಾದಲ್ಲಿ ಹೈವೆ ಮೇಲೆ ಹಾದು ಹೋಗುತ್ತಿರುವಾಗ ಭೀಕರ ಅಪಘಾತ ನಡೆದಿದೆ. ಅಪಘಾತದಲ್ಲಿ ಕಾರು ನಜ್ಜು ಗುಜ್ಜಾಗಿದ್ದು, ಯುವಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಿನಲ್ಲಿ ಸಿಲುಕಿಕೊಂಡಿದ್ದ. ಇದೇ ವೇಳೆ ಮೊಗಾದಲ್ಲಿ ಸೋನು ಸೂದ್ ತನ್ನ ಸಹೋದರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್ ಪರ ಪ್ರಚಾರ ಮುಗಿಸಿ ಮಂಗಳವಾರ ಅದೇ ಮಾರ್ಗವಾಗಿ ಹೋಗುತ್ತಿದ್ದ ಸೋನು ಸೂದ್ ಕಾರು ಘಟನೆ ಕಂಡು ನಿಲ್ಲಿಸಿ, ರಕ್ಷಣೆಗೆ ಧಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂತ್ರಸ್ತನನ್ನು ಕಾರಿನಿಂದ ಹೊರ ತರಲು ಮುಂದಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಬಾಗಿಲು ಜಾಮ್ ಆಗಿತ್ತು. ಕಡೆಗೆ ಬಾಗಿಲು ತೆರೆದು ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸೂದ್ ಕಾರ್ಯಕ್ಕೆ ಶ್ಲಾಘನೆ
ಯುವಕದ ಸ್ಥಿತಿ ಇದೀಗ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಪ್ರತಿಯೊಂದು ಜೀವವೂ ಮಹತ್ವದ್ದು ಎಂಬ ಸಂದೇಶದೊಂದಿಗೆ ಈ ವಿಡಿಯೋವನ್ನು ಸೋನು ಸೂದ್ ಹಂಚಿಕೊಂಡಿದ್ದಾರೆ. ಅವರ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.
ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…
ಶಾಸಕ ಇಕ್ಬಾಲ್ ಹಸೇನ್ ಅವರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್ ಮಾಡಿದ್ದ ಆರೋಪದಡಿ…
ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ
ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…
ಮೊಬೈಲ್ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…
ಸೋಷಿಯಲ್ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್ ಮಾಡುತ್ತ, ಹಲ್ಚಲ್ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…