ಚಂಡೀಗಢ: ಬರೋಬ್ಬರಿ ನಾಲ್ಕು ಸ್ನಾತಕೋತ್ತರ ಪದವಿ ಒಂದು ಪಿಹೆಚ್ಡಿ ಮಾಡಿರೋ ವಿದ್ಯಾವಂತ ತಳ್ಳೋ ಗಾಡಿಯಲ್ಲಿ ತರಕಾರಿ ಮಾರಿ ಜೀವನ ಸಾಗಿಸುತ್ತಿರೋ ಘಟನೆ ಪಂಜಾಬ್ನಲ್ಲಿ ನಡೆದಿದೆ. ಡಾ. ಸಂದೀಪ್ ಸಿಂಗ್ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದು ಒಂದು ಪಿಹೆಚ್ಡಿ ಕೂಡ ಪಡೆದುಕೊಂಡಿದ್ದಾರೆ. ಆದರೆ ಪ್ರೊಫೆಸರ್ ಕೆಲಸಕ್ಕೆ ಸರಿಯಾದ ಸಂಬಳ ಸಿಗದೇ ಕೊನೆಗೆ ತರಕಾರಿ ಮಾರುವ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಡಾ. ಸಂದೀಪ್ ಸಿಂಗ್ ಅವರು ಈ ಹಿಂದೆ ಪಂಜಾಬ್ ಯೂನಿರ್ವಸಿಟಿಯಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ ವಿಶ್ವವಿದ್ಯಾಲಯ ನೀಡುತ್ತಿದ್ದ ಸಂಬಳ ಜೀವನ ಸಾಗಿಸಲು ಕಷ್ಟವಾಗುತ್ತಿತ್ತು. ಹೀಗಾಗಿ ತನ್ನ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಹೀಗಾಗಿ ಸಂದೀಪ್ ಸಿಂಗ್, ಪ್ರೊಫೆಸರ್ ವೃತ್ತಿಗೆ ಗುಡ್ ಬೈ ಹೇಳಿದ್ದಾರೆ. ಕೊನೆಗೆ ಪಿಹೆಚ್ಡಿ ಸಬ್ಜಿ ವಾಲಾ ಅನ್ನೋ ಬೋರ್ಡ್ ಹಾಕಿಕೊಂಡು ತರಕಾರಿಯನ್ನು ಮಾರಾಟ ಮಾಡುತ್ತಿದ್ದಾರೆ.
ನಾನು ಗುರು ನಾನಕ್ ದೇವ್ ಅವರ ಬೋಧನೆಗಳಿಂದ ಪ್ರೇರೇಪಿತನಾಗಿದ್ದೇನೆ. ಯಾರ ಮುಂದೆ ಕೈ ಚಾಚಿ ಭೀಕ್ಷೆ ಬೇಡಲು ನನಗೆ ಇಷ್ಟವಿಲ್ಲ. ಹೀಗಾಗಿ ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಸರ್ಕಾರ, ಯೂನಿವರ್ಸಿಟಿಗಳು ಕೆಲಸವನ್ನು ಕೊಟ್ಟಿಲ್ಲ ಅನ್ನೋ ಬೇಸರವಿಲ್ಲ. ಮುಂದೊಂದು ದಿನ ನಾನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ಒಂದು ಕೋಚಿಂಗ್ ಸೆಂಟರ್ ತೆರೆಯುತ್ತೇನೆ ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.
https://twitter.com/PunjabSpectrum/status/1739738449333153960