ಲೇಹ್: ‘ಪೆಪ್ಪರ್ಫ್ರೈ’ (Pepperfry) ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಲೇಹ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಅಂಬರೀಶ್ ಮೂರ್ತಿ ಲೇಹ್ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಆನ್ಲೈನ್ ಪೀಠೋಪಕರಣಗಳ ಅಂಗಡಿಯ ಇನ್ನೊಬ್ಬ ಸಹ-ಸಂಸ್ಥಾಪಕ ಆಶಿಶ್ ಶಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮ ಸಂಗಾತಿ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗಿದೆ. ನಿನ್ನೆ ರಾತ್ರಿ ಲೇಹ್ನಲ್ಲಿ ಹೃದಯಾಘಾತದಿಂದ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಶಕ್ತಿಗಾಗಿ ಪ್ರಾರ್ಥಿಸಿ” ಎಂದು ಶಾ ಬರೆದುಕೊಂಡಿದ್ದಾರೆ.
‘ಹೃದಯ ಸ್ತಂಭನದಿಂದ ಅಂಬರೀಶ್ ಮೂರ್ತಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖ ಮತ್ತು ಆಘಾತವಾಗಿದೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಅದ್ಭುತ ಉದ್ಯಮಿ ಮತ್ತು ಅನೇಕರಿಗೆ ಸ್ಫೂರ್ತಿ ಎಂದು ಉದ್ಯಮಿ ಸ್ವಾತಿ ಭಾರ್ಗವ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ