ಒಡಿಶಾ: ಒಡಿಶಾದ ಬಾಲಸೋರ್ನಲ್ಲಿ ಕಳೆದ ಕೆಲವು ದಿನಗಳಿಂದ ಬಾಲಕ ತನ್ನ ತಂದೆಗೆ ಬಿರಿಯಾನಿ ತರುವಂತೆ ಹೇಳುತ್ತಿದ್ದ. ಆದರೆ, ತಂದೆ ಪ್ರತಿದಿನ ಬರಿಗೈಲಿ ಬರುತ್ತಿದ್ದನ್ನು ಕಂಡು ನಿರಾಸೆಗೊಂಡ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಒಡಿಶಾದ ಬಾಲಸೋರ್ನ ಮನೋರಂಜನ್ ಮಹಣ್ಣ ಎಂಬುವವರ 13 ವರ್ಷದ ಪುತ್ರ ಸ್ಥಳೀಯ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಬಾಲಕ ತನ್ನ ತಂದೆಗೆ ಬಿರಿಯಾನಿ ತರುವಂತೆ ಹೇಳುತ್ತಿದ್ದ.
ಆದರೆ, ಮನೋರಂಜನ್ ಬಾಲಸೋರ್ ಅವರು ಪಂಚಾಯತಿ ಚುನಾವಣೆಗೆ ಸ್ಪರ್ಧಿಸುವುದರಲ್ಲಿ ನಿರತರಾಗಿದ್ದರು. ಪ್ರತಿದಿನ ಬರಿಗೈಯಲ್ಲಿ ಮನೆಗೆ ಬರುತ್ತಿರುವುದನ್ನು ಕಂಡು ಬಾಲಕನಿಗೆ ನಿರಾಸೆಯಾಯಿತು.
ಬಳಿಕ ಒಂದು ದಿನ ರಾತ್ರಿ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಆತನನ್ನು ಪೋಷಕರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಿರಿಯಾನಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿರಲಿಲ್ಲ ಎಂದು ಮನೋರಂಜನ್ ದಂಪತಿ ಅಳಲು ತೋಡಿಕೊಂಡಿದ್ದಾರೆ.