News Karnataka Kannada
Monday, May 06 2024
ದೇಶ

ಆರನೆ ಬಜೆಟ್ ಮಂಡಿಸಲಿರುವ ಸೀತಾರಾಮನ್; ದಾಖಲೆ ಸೃಷ್ಟಿಸಲಿದ್ದಾರೆ ವಿತ್ತಸಚಿವೆ

ಫೆಬ್ರವರಿ ೧ ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಆ ಮೂಲಕ ಈ ಮುಂಚೆ ಹಣಕಾಸು ಸಚಿವರಾಗಿದ್ದು ಸತತ ಐದು ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾರ ದಾಖಲೆಗಳನ್ನು ಹಿಂದಿಕ್ಕಲಿದ್ದಾರೆ.
Photo Credit : News Kannada

ನವದೆಹಲಿ: ಫೆಬ್ರವರಿ ೧ ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಲಿದ್ದು, ಆ ಮೂಲಕ ಈ ಮುಂಚೆ ಹಣಕಾಸು ಸಚಿವರಾಗಿದ್ದು ಸತತ ಐದು ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾರ ದಾಖಲೆಗಳನ್ನು ಹಿಂದಿಕ್ಕಲಿದ್ದಾರೆ.

ಸೀತಾರಾಮನ್ ಮಂಡಿಸಲಿರುವ ೨೦೨೪-೨೫ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಪಾಲಿಸಲಾಗುತ್ತದೆ.

ಲೋಕಸಭೆಯ ಚುನಾವಣೆ ಹತ್ತಿರದಲ್ಲಿರುವ ಸಂದರ್ಭದಲ್ಲಿ ಪ್ರಮುಖ ನೀತಿ ಬದಲಾವಣೆ, ಪ್ರಮುಖ ಯೋಜನೆಗಳ ಘೋಷಣೆ ಸಾಧ್ಯತೆ ಕಡಿಮೆಯಿದ್ದು, ಕಳೆದ ತಿಂಗಳಲ್ಲಿ ಸೀತಾರಾಮನ್ ಇದರ ಸ್ಪಷ್ಟ ಸೂಚನೆ ನೀಡಿದ್ದರು. ಚುನಾವಣಾನಂತರ ರಚನೆಯಾಗುವ ಸರ್ಕಾರ ೨೦೨೪-೨೫ರ ಪೂರ್ಣ ಬಜೆಟ್ ಮಂಡಿಸಲಿರುವುದರಿಂದ ಮಧ್ಯಂತರ ಬಜೆಟ್ ಪ್ರಮುಖ ನೀತಿ ಘೋಷಣೆಗಳನ್ನು ಒಳಗೊಂಡಿರುವುದಿಲ್ಲ.

೨೦೧೯ರ ಸಾರ್ವತ್ರಿಕ ಚುನಾವಣೆಯ ನಂತರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್, ಇಂದಿರಾ ಗಾಂಧಿಯ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು