News Karnataka Kannada
Saturday, May 11 2024
ಮಣಿಪುರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮೂವರ ಸಾವು

Three killed in violence in Manipur
Photo Credit : News Kannada

ಇಂಫಾಲ: ಮಣಿಪುರದಲ್ಲಿ 13 ದಿನಗಳ ಕಾಲ ಶಾಂತಿಯ ವಾತಾವರಣವಿತ್ತು. ಇದೀಗ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಉಖ್ರುಲ್ ಜಿಲ್ಲೆಯಲ್ಲಿ ಶುಕ್ರವಾರ ಮೂವರು ಗ್ರಾಮ ರಕ್ಷಣಾ ಸ್ವಯಂಸೇವಕರು (ವಿಡಿಎಫ್) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಡಕಟ್ಟು ಪ್ರಾಬಲ್ಯದ ಥೋವೈ ಗ್ರಾಮದಲ್ಲಿ ಎರಡು ಗುಂಪುಗಳ ನಡುವಿನ ಗುಂಡಿನ ಚಕಮಕಿ ನಡೆದಿದೆ ಎಂದು ಉಖ್ರುಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಂಗ್ಸೆಮ್ ವಶುಮ್ ತಿಳಿಸಿದ್ದಾರೆ. ಮೃತರನ್ನು ಜಮ್‌ಖೋಗಿನ್ ಹಾಕಿಪ್ (26), ತಂಗ್‌ಖೋಕೈ ಹಾಕಿಪ್ (35) ಮತ್ತು ಹೊಲೆನ್ಸನ್ ಬೈಟ್ (24) ಎಂದು ಗುರುತಿಸಲಾಗಿದೆ. ಸಂಯೋಜಿತ ಭದ್ರತಾ ಪಡೆಗಳ ಬೃಹತ್ ತುಕಡಿಯು ಸ್ಥಳಕ್ಕೆ ಧಾವಿಸಿದ್ದು, ದುಷ್ಕರ್ಮಿಗಳನ್ನು ಹಿಡಿಯಲು ಕೂಂಬಿಂಗ್ ಪ್ರಾರಂಭಿಸಿದೆ. ಆಗಸ್ಟ್ 5 ರಂದು ಬಿಷ್ಣುಪುರ್ ಜಿಲ್ಲೆಯ ಕ್ವಕ್ತಾ ಲಂಖೈ ಗ್ರಾಮದಲ್ಲಿ ಒಬ್ಬ ವೃದ್ಧ ಮತ್ತು ಆತನ ಪುತ್ರನನ್ನು ಕೊಲೆ ಮಾಡಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು