ಇಂಫಾಲ: ಮಣಿಪುರದ ಬಿಷ್ಣುಪುರ ಜಿಲ್ಲೆಯ ಕುಂಬಿ ಮತ್ತು ತೌಬಲ್ ಜಿಲ್ಲೆಯ ವಾಂಗೂ ನಡುವೆ ಗುಂಡಿನ ದಾಳಿ ನಡೆದಿದೆ. ದಾಳಿ ನಡೆದ ಪ್ರದೇಶದಲ್ಲಿ ಶುಂಠಿ ಕೊಯ್ಲು ಮಾಡಲು ಹೋದ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಓಯಿನಮ್ ರೋಮೆನ್ ಮೈತಿ (45), ಅಹಾಂತೇಮ್ ದಾರಾ ಮೈತಿ (56), ತೌಡಮ್ ಇಬೊಮ್ಚಾ ಮೈತಿ (53) ಮತ್ತು ತೌದಮ್ ಆನಂದ್ ಮೈತಿ (27) ಎಂಬುವವರು ನಾಪತ್ತೆಯಾಗಿದವರು. ಈ ಬಗ್ಗೆ ಕುಂಬಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ.
ನಾಲ್ವರು ಬಂಡುಕೋರರ ವಶದಲ್ಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಶೋಧ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರದ ಸಹಾಯವನ್ನು ಕೋರಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚಿಗೆ ಬಿಷ್ಣುಪುರ್ ಜಿಲ್ಲೆಯ ಹಾತಕ್ ಗ್ರಾಮದಲ್ಲಿ ಬಂಡುಕೋರರು ಬಂದೂಕು ಮತ್ತು ಬಾಂಬ್ ದಾಳಿ ನಡೆಸಿದ್ದಾರೆ. ಈ ನಡುವೆ 100 ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.