ಮುಂಬೈ: ಇಂಡಿಯಾ ಬಣ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಮತ್ತು ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಜ್ಜಾಗಿದೆ ಎಂದು ಶಿವಸೇನೆ (ಯುಬಿಟಿ) ಅಧ್ಯಕ್ಷ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.
ಇಂಡಿಯಾ ಒಕ್ಕೂಟದ ಮೂರನೇ ಸಭೆ ಮುಂಬೈನಲ್ಲಿ ನಡೆದಿದ್ದು ಸಭೆ ಬಳಿಕ ಠಾಕ್ರೆ ಮಾಧ್ಯಮಗಳೊಂದಿಗೆ ಮಾತನಾಡಿದರು.
“ನಾವು ಹಂತ ಹಂತವಾಗಿ ಮುಂದುವರಿಯುತ್ತಿದ್ದೇವೆ ಮತ್ತು ಮೂರನೇ ಇಂಡಿಯಾ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಾವೆಲ್ಲರೂ ರಾಷ್ಟ್ರ ಪ್ರೇಮಿಗಳು ಮತ್ತು ದೇಶವನ್ನು ವಿರೋಧಿಸುವವರ ವಿರುದ್ಧ ನಾವು ಹೋರಾಡುತ್ತೇವೆ, ಅವರು ಯಾರೆಂದು ನಿಮಗೆಲ್ಲರಿಗೂ ತಿಳಿದಿದೆ ”ಎಂದು ಭಾರತದಾದ್ಯಂತ 28 ರಾಜಕೀಯ ಪಕ್ಷಗಳು ಭಾಗವಹಿಸಿದ್ದ ಸಮಾವೇಶವನ್ನು ಆಯೋಜಿಸಿದ್ದ ಠಾಕ್ರೆ ಹೇಳಿದರು.
ಭಾರತೀಯ ಜನತಾ ಪಕ್ಷವನ್ನು ಹೆಸರಿಸದೆ ವಾಗ್ದಾಳಿ ನಡೆಸಿದ ಅವರು ಇಂಡಿಯಾ ಒಕ್ಕೂಟವು ನಿರಂಕುಶಾಧಿಕಾರ, ಭ್ರಷ್ಟಾಚಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತದೆ, ‘ಭಾರತೀಯರ ಪರವಾಗಿ ಮಾತನಾಡುತ್ತದೆ, ದೇಶದ ವಿವಿಧ ಭಾಗಗಳಲ್ಲಿನ ದೌರ್ಜನ್ಯಗಳ ವಿರುದ್ಧ ಹೋರಾಡುತ್ತದೆ. ‘ಹೊಸತನಕ್ಕಾಗಿ ನಮ್ಮ ಒಕ್ಕೂಟ ಕೆಲಸ ಮಾಡುತ್ತದೆ’ ಎಂದು ಅವರು ಪುನರುಚ್ಚರಿಸಿದರು.
“ನಾವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಬಗ್ಗೆ ಈ ಮೊದಲು ಘೋಷಣೆ ಕೇಳಿದ್ದೆವು, ಆದರೆ ಅದರ ನಂತರ, ಮಿತ್ರರನ್ನು ಮರೆತು ಮಾತುತಪ್ಪಿದರು. ವರ್ಷಗಳ ಕಾಲ ‘ಲೂಟಿ’, ಚುನಾವಣಾ ಸಮಯದಲ್ಲಿ ‘ಛೂಟ್’ (ಗ್ಯಾಸ್ ಸಿಲಿಂಡರ್ ಬೆಲೆಗಳ ಹಿನ್ನಡೆ) ಮಾಡುವ ಕೆಲಸ ನಡೆಯುತ್ತಿದೆ. ನಾವು ಇದನ್ನೆಲ್ಲ ನಿಲ್ಲಿಸುತ್ತೇವೆ” ಎಂದು ಠಾಕ್ರೆ ಘೋಷಿಸಿದರು.