ಸಿಂಧುದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೊಂಕಣಕ್ಕೆ ಭೇಟಿ ನೀಡಿದ್ದು, ರಾಜ್ಕೋಟ್ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ರಾಜ್ಕೋಟ್ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು 1660 ರಲ್ಲಿ ನಿರ್ಮಿಸಿದರು. ಈ ಕೋಟೆಯ ಮೇಲೆ ಭವ್ಯವಾದ ಶಿವನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಭಾಷಣದ ಆರಂಭದಲ್ಲಿ ನರೇಂದ್ರ ಮೋದಿಯವರು ಛತ್ರಪತಿ ವೀರ ಶಿವಾಜಿ ಮಹಾರಾಜ್ ಕೀ ಜೈ, ಛತ್ರಪತಿ ವೀರ ಸಂಭಾಜಿ ಮಹಾರಾಜ್ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ. ಆ ಬಳಿಕ ಸಿಂಧುದುರ್ಗದ ಮಹತ್ವ ಹಾಗೂ ಸಿಂಧುದುರ್ಗದ ಕೋಟೆಯ ಮಹತ್ವವನ್ನು ವಿವರಿಸಿದರು. ಶಿವರಾಯರ ಮತ್ತು ಮಾವಲಿಯರ ಮಹಿಮೆಯ ಕಥೆ ಹೇಳಿದ ಮೋದಿ ಈ ಎರಡು ದೊಡ್ಡ ಘೋಷಣೆಗಳನ್ನು ಮಾಡಿದರು. ಅದೇನೆಂದರೆ ಇನ್ನು ಮುಂದೆ ನೌಕಾಪಡೆಯ ಸಮವಸ್ತ್ರದಲ್ಲಿ ಶಿವಾಜಿ ಮಹಾರಾಜರ ರಾಜಮುದ್ರೆ ಇರಲಿದೆ. ಭಾರತೀಯ ನೌಕಾಪಡೆಯು ಈಗ ಭಾರತೀಯ ಸಂಪ್ರದಾಯದ ಪ್ರಕಾರ ತನ್ನ ಹುದ್ದೆಗಳನ್ನು ಹೆಸರಿಸಲಿದೆ ಎಂದು ನರೇಂದ್ರ ಮೋದಿ ಘೋಷಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ನಾವು ಒತ್ತು ನೀಡುತ್ತಿದ್ದೇವೆ. ನೀವು ನೌಕಾಪಡೆಯಲ್ಲಿ ಮೊದಲ ಮಹಿಳಾ ಅಧಿಕಾರಿಯನ್ನು ನೇಮಿಸಿದ್ದಕ್ಕಾಗಿ ನಾನು ನೌಕಾಪಡೆಯನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.