ನಾಗ್ಪುರ: ಮೋದಿ ಪ್ರಧಾನಿಯಾಗಿ ಆಯ್ಕೆಯಾದರೆ ಪ್ರಜಾಪ್ರಭುತ್ವಕ್ಕೆ ಅಪಾಯವಾಗುತ್ತದೆ ಎನ್ನುತ್ತಿರುವ ವಿಪಕ್ಷಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ನೆನಪಿಸಿದ ಪ್ರಧಾನಿ ನರೇಂದ್ರ ಮೋದಿ, ಆಗ ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನಾಗ್ಪುರ ಜಿಲ್ಲೆಯ ಕನ್ಹನ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ ʼಈ ಬಾರಿಯ ಮತದಾನ ಮುಂದಿನ ಒಂದು ಸಾವಿರ ವರ್ಷಗಳಿಗೆ ಹಾಕುವ ಬುನಾದಿʼ ಎಂದರು.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿಯನ್ನು ವಿರೋಧಿಸಿದ ವಿಪಕ್ಷಗಳು ಪ್ರತ್ಯೇಕವಾದಿಗಳ ಪ್ರತಿ ಸೌಮ್ಯಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ ಅವರು, 370ನೇ ವಿಧಿಯ ರದ್ದತಿಯಿಂದ ಕೇಂದ್ರಾಡಳಿತ ಪ್ರದೇಶದ ದಲಿತ, ಬುಡಕಟ್ಟು ಸಮುದಾಯದ ಜನ ಸಾಂವಿಧಾನಿಕ ಹಕ್ಕುಗಳನ್ನು ಪಡೆದಿದ್ದಾರೆ ಎಂದರು.