ಮುಂಬೈ: ಪ್ರಾಯಶಃ ಭಾರತದ ಶ್ರೀಮಂತ ಗಣಪತಿಯೆಂದೇ ಖ್ಯಾತಿ ಪಡೆದಿರುವ ಜಿಎಸ್ಬಿ ಸೇವಾ ಮಂಡಲದ ‘ಮಹಾಗಣಪತಿ’ ಈ ವರ್ಷ 66.5 ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳು, 295 ಕಿಲೋಗ್ರಾಂಗಳಿಗಿಂತ ಹೆಚ್ಚು ಬೆಳ್ಳಿಯ ಆಭರಣಗಳಿಂದ ಕಂಗೊಳಿಸುತ್ತಿದೆ.
ಅಲ್ಲದೆ ಅತ್ಯಮೂಲ್ಯ ವಸ್ತುಗಳು ಗಣಪತಿಯನ್ನು ಅಲಂಕರಿಸಿವೆ. ನಗರದ ಕಿಂಗ್ಸ್ ಸರ್ಕಲ್ನಲ್ಲಿರುವ ಜಿಎಸ್ಬಿ ಮಂಡಲವು ತನ್ನ 69 ನೇ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ ಎಂದು ಜಿಎಸ್ಬಿ ಸೇವಾ ಮಂಡಲದ ವಕ್ತಾರರು ಹೇಳಿದ್ದಾರೆ.
“ಮಂಡಲ ಸಮಿತಿಯು ಈ ವರ್ಷ ₹ 360.40 ಕೋಟಿ ವಿಮಾ ರಕ್ಷಣೆ ಪಡೆದುಕೊಂಡಿದೆ. ಭಕ್ತರ ಅನುಕೂಲಕ್ಕೆ QR ಕೋಡ್ ಮತ್ತು ಡಿಜಿಟಲ್ ಲೈವ್ ಕಾರ್ಯವಿಧಾನಗಳನ್ನು ಪರಿಚಯಿಸಲಾಗಿದೆ. ಅಲ್ಲದೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಯಶಸ್ವಿಯಾಗಿ ನಿರ್ಮಾಣವಾಗುವಂತೆ ಸಂಕಲ್ಪಿಸಿ ಹವನ ನಡೆಸಲಾಗಿದೆ ಎಂದು ಸಮಿತಿ ಸದಸ್ಯರು ಹೇಳಿದ್ದಾರೆ.