ಛತ್ರಪತಿ ಸಂಭಾಜಿನಗರ: ಮಿನಿ ಬಸ್ ಹಾಗೂ ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿ ಕನಿಷ್ಠ 12 ಜನರು ಸಾವನ್ನಪ್ಪಿ 23 ಮಂದಿ ಗಾಯಗೊಂಡ ಘಟನೆ ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್ಪ್ರೆಸ್ವೇಯ ವೈಜಾಪುರ ಬಳಿ ಭಾನುವಾರ ಮುಂಜಾನೆ ನಡೆದಿದೆ.
ತೀರ್ಥಯಾತ್ರೆ ಮುಗಿಸಿ ಬುಲ್ಧಾನಾದಿಂದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲಕ ನಾಸಿಕ್ಗೆ ಮಿನಿ ಬಸ್ ಸಾಗುತ್ತಿತ್ತು. ಮಧ್ಯರಾತ್ರಿ 1.15 ರ ಸುಮಾರಿಗೆ, ಹೆದ್ದಾರಿಯ ಬದಿಯಲ್ಲಿ ಸ್ವಲ್ಪ ಸಮಯ ವಿಶ್ರಾಂತಿಗಾಗಿ ನಿಂತಿತ್ತು. ಈ ವೇಳೆ ಹಿಂದಿನಿಂದ ಟ್ರಕ್ ಡಿಕ್ಕಿಯಾಗಿದ್ದು, ಕನಿಷ್ಠ 12 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂತ್ರಸ್ತರು ಬುಲ್ಧಾನಾದ ಪ್ರಸಿದ್ಧ ಸೈಲಾನಿ ಬಾಬಾ ದರ್ಗಾದಲ್ಲಿ ತೀರ್ಥಯಾತ್ರೆ ಮಾಡಿದ ನಂತರ ನಾಸಿಕ್ನಲ್ಲಿರುವ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಗಾಯಾಳುಗಳನ್ನು ಛತ್ರಪತಿ ಸಂಭಾಜಿನಗರದ ಆಸ್ಪತ್ರೆ, ನಾಸಿಕ್ ಮತ್ತು ಪುಣೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.