ಪುಣೆ: ವಸತಿ ಕಟ್ಟಡವೊಂದರಲ್ಲಿ ಸೆಪ್ಟಿಕ್ ಟ್ಯಾಂಕನ್ನು ಸ್ವಚ್ಛಗೊಳಿಸುವ ವೇಳೆ ಮಹಾರಾಷ್ಟ್ರದ ಪುಣೆ ನಗರದ ಹೊರವಲಯದಲ್ಲಿರುವ ಲೋನಿ ಕಲ್ಭೋರ್ ಪ್ರದೇಶದಲ್ಲಿ ಬುಧವಾರ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
‘ಸೆಪ್ಟಿಕ್ ಟ್ಯಾಂಕ್ನಲ್ಲಿ ಹಗ್ಗದಿಂದ ಇಳಿದು ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೊದಲ ಮೃತ ವ್ಯಕ್ತಿಯನ್ನು ಟ್ಯಾಂಕಿನಿಂದ ಹೊರತೆಗೆದಾಗ ಅವರು ಪ್ರಜ್ಞೆ ತಪ್ಪಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
ಇತರ ಮೂವರನ್ನೂ ತಕ್ಷಣವೇ ಟ್ಯಾಂಕ್ನಿಂದ ಹೊರತರಲಾಗಿತ್ತು. ಆದರೆ ಅವರು ಆ ವೇಳೆಗೆ ಅಸುನೀಗಿದ್ದರು ಎಂದು ಅವರು ಹೇಳಿದರು.