News Karnataka Kannada
Sunday, May 05 2024
ಮಹಾರಾಷ್ಟ್ರ

ಸಧ್ಯಕ್ಕೆ ಮಾಸ್ಕ್​ ಹಾಗೂ ಸಾಮಾಜಿಕ ಅಂತರಗಳಿಂದ ಮುಕ್ತಿ ಇಲ್ಲ

Corona 19 6 21 No 196211 Newsk 5950993830
Photo Credit :

ಕಳೆದ 20 ತಿಂಗಳಿನಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ದೇಶವು ನಿನ್ನೆಯಷ್ಟೇ ಹೊಸ ಮೈಲಿಗಲ್ಲನ್ನು ತಲುಪಿದೆ. ದೇಶದಲ್ಲಿ 100 ಕೋಟಿ ಕೋವಿಡ್​ ಲಸಿಕೆಯನ್ನು ವಿತರಣೆ ಮಾಡುವ ಮೂಲಕ ಸಾಧನೆಗೈಯಲಾಗಿದೆ. ಇಷ್ಟಾದರೂ ಕೂಡ ಸದ್ಯಕ್ಕಂತೂ ನಮಗೆ ಮಾಸ್ಕ್​ ಹಾಗೂ ಸಾಮಾಜಿಕ ಅಂತರಗಳಿಂದ ಮುಕ್ತಿ ಇಲ್ಲ ಎಂದು ಮಹಾರಾಷ್ಟ್ರದ ಟಾಸ್ಕ್​ ಫೋರ್ಸ್​ ಅಭಿಪ್ರಾಯಪಟ್ಟಿದೆ.

ದೇಶದಲ್ಲಿ ಕೊರೊನಾ 2ನೇ ಅಲೆಯು ಭಾಗಶಃ ತನ್ನ ಆರ್ಭಟವನ್ನು ನಿಲ್ಲಿಸಿದೆ. ಆದರೂ ಮೂರನೇ ಅಲೆಯ ಆತಂಕ ಇನ್ನೂ ಜೀವಂತವಾಗಿದೆ. ಸದ್ಯಕ್ಕಂತೂ ಕೊರೊನಾ 3ನೇ ಅಲೆ ಸಂಭವಿಸುವುದಿಲ್ಲ ಎಂದು ಅನೇಕ ಅಧ್ಯಯನಗಳು ಹೇಳಿದ್ದರೂ ಸಹ ದೀಪಾವಳಿ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡೇಲ್ಟಾ ರೂಪಾಂತರಿಯ ಬಳಿಕ ಸದ್ಯ ಯಾವುದೇ ಹೊಸ ರೂಪಾಂತರಿಗಳು ಪತ್ತೆಯಾಗಿಲ್ಲ. ಕೊರೊನಾದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾ ಮೂರನೇ ಅಲೆಯನ್ನು ಅನಾಯಾಸವಾಗಿ ತಡೆಯಬಹುದಾಗಿದೆ. ಮಹಾರಾಷ್ಟ್ರದಲ್ಲಂತೂ ಪ್ರತಿನಿತ್ಯ 1.5 ಲಕ್ಷ ಟೆಸ್ಟ್​​ ಮಾಡಿಸಲಾಗ್ತಿದೆ. ಇದೇ ಕಾರಣದಿಂದಲೇ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸೋಂಕಿನ ಸಂಖ್ಯೆಯು ಇಳಿಕೆ ಕಂಡಿದೆ ಎಂದು ಟಾಸ್ಕ್​ ಫೋರ್ಸ್ ಹೇಳಿದೆ.

ಕೋವಿಡ್ ಲಸಿಕೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿದೆ. ಆದರೆ ಕೊರೊನಾ ಲಸಿಕೆ ಬಳಿಕವೂ ಕನಿಷ್ಟ ಇನ್ನೊಂದು ವರ್ಷವಾದರೂ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್​ ಮಾರ್ಗಸೂಚಿಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಹಾಗಿದ್ದಲ್ಲಿ ಮಾತ್ರ ಕೊರೊನಾ ಸೋಂಕಿನಿಂದ ಬಚಾವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು