ಪುಣೆ : ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಎಕ್ಸ್ಪ್ರೆಸ್ವೇ ನಿರ್ಮಿಸುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ‘ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಎಕ್ಸ್ಪ್ರೆಸ್ವೇ ನಿರ್ಮಿಸುವವನಿದ್ದೇನೆ.
ಅದರ ಎರಡೂ ಪಕ್ಕದಲ್ಲಿ ನೀವು ಭೂಸ್ವಾಧೀನ ಮಾಡಿಕೊಂಡು ಹೊಸ ಪುಣೆ ನಗರವನ್ನು ನಿರ್ಮಿಸಿ. ಅದಕ್ಕೆ ಮೆಟ್ರೋ ರೈಲು ಮತ್ತು ಇತರ ರೈಲುಗಳ ಸಂಪರ್ಕ ಕಲ್ಪಿಸಿ. ಪುಣೆ ನಗರ ಬಹಳ ಕಿಕ್ಕಿರಿದಿದೆ. ಟ್ರಾಫಿಕ್ ಹಾಗೂ ಮಾಲಿನ್ಯ ಸಮಸ್ಯೆ ಮಿತಿಮೀರಿದೆ. ಹೀಗಾಗಿ ನಗರ ವಿಕೇಂದ್ರೀಕರಣ ಮಾಡಬೇಕು’ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಗಡ್ಕರಿ ಹೇಳಿದ್ದಾರೆ.